ಮುಳಿಯ ಗೋಲ್ಡ್ ಆಂಡ್ ಡೈಮಂಡ್
ಮಡಿಕೇರಿ ಶಾಖೆಯಲ್ಲಿ ಭವ್ಯ “ಡೈಮಂಡ್ ಫೆಸ್ಟ್” ಚಾಲನೆ
ಗಣ್ಯ ಅತಿಥಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥೆಯ ಈ ನೂತನ ಉಪಕ್ರಮಕ್ಕೆ ಶುಭ ಹಾರೈಸಿದರು.
ಉದ್ಘಾಟಿಸಿದ ಗಣ್ಯ ಅತಿಥಿಗಳು:
- ಶ್ರೀಮತಿ ಮೇರಿ ಚಿಟ್ಟಿಯಪ್ಪ (ಅಧ್ಯಕ್ಷರು, ಕೋ-ಆಪರೇಟಿವ್ ಮಹಿಳಾ ಸಮಾಜ, ನಾಪೊಕ್ಲು)
- ಶ್ರೀಮತಿ ಅರವಿಂದ ಅಣ್ಣಪ್ಪ (ಅಧ್ಯಕ್ಷರು, ಕೊಡಗು ಜಿಲ್ಲಾ ಮಹಿಳಾ ಬ್ಯಾಂಕ್)
- ಶ್ರೀಮತಿ ಅಪ್ಪುಮಣಿಯಂಡ ಡೇಸಿ ಸೋಮಣ್ಣ (ಅಧ್ಯಕ್ಷರು, ಅಂಬಲ ಮಹಿಳಾ ಸಮಾಜ, ನೆಲಜಿ)
- ಶ್ರೀಮತಿ ಮುಲ್ಲಂಡ ಶೋಭಾ ಚಂಗಪ್ಪ (ಅಧ್ಯಕ್ಷರು, ಅವರ್ ಕ್ಲಬ್, ಚೆಟ್ಟಳ್ಳಿ)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಳಿಯ ಸಂಸ್ಥೆಯ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮುಳಿಯ ಅವರು, ವಜ್ರಾಭರಣಗಳ ಕಠಿಣತೆ, ನೈಜತೆ ಹಾಗೂ ಅವುಗಳ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕರಿಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಒಂದು ತಿಂಗಳ ಕಾಲ ನಡೆಯಲಿರುವ ಈ ಫೆಸ್ಟ್ನಲ್ಲಿ ಗ್ರಾಹಕರಿಗೆ ವಿಶಿಷ್ಟ ಕಲೆಕ್ಷನ್ಗಳು ಲಭ್ಯವಿವೆ ಎಂದು ಅವರು ತಿಳಿಸಿದರು.
ಫೆಸ್ಟ್ನ ವಿಶೇಷತೆಗಳು ಮತ್ತು ಆಫರ್ಗಳು
ಖಚಿತ ಉಡುಗೊರೆ
ರೂ. 50,000 ಕ್ಕಿಂತ ಹೆಚ್ಚಿನ ವಜ್ರಾಭರಣಗಳ ಖರೀದಿಗೆ ಆಕರ್ಷಕ ಖಚಿತ ಉಡುಗೊರೆ ನೀಡಲಾಗುವುದು.
ಬಂಪರ್ ಬಹುಮಾನ
ಲಕ್ಕಿ ಡ್ರಾ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ವಿನಿಮಯ ಸೌಲಭ್ಯ
ವಜ್ರಾಭರಣಗಳ ಮೇಲೆ ಶೇ.95 ಎಕ್ಸ್ಚೇಂಜ್ ಹಾಗೂ ಶೇ.90 ಬೈಬ್ಯಾಕ್ ಸೌಲಭ್ಯ ಲಭ್ಯವಿದೆ.
ಮದುವೆ ಹಾಗೂ ಹಬ್ಬದ ಸೀಸನ್ ಗಮನದಲ್ಲಿಟ್ಟುಕೊಂಡು ಹಾರಗಳು, ಕಿವಿಯೋಲೆಗಳು ಹಾಗೂ ಉಂಗುರಗಳು ಸೇರಿದಂತೆ ನೂರಾರು ವಿನ್ಯಾಸಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಉತ್ಸವವು ಅಮೂಲ್ಯ ಡೈಮಂಡ್ಸ್ ಹಾಗೂ ಕಿನ್ನ ಡೈಮಂಡ್ - ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್ಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಚಂದ್ರಶೇಖರ್, ಮುಳಿಯ ಗೋಣಿಕೊಪ್ಪ ಮಳಿಗೆಯ ಪಾಲುದಾರರಾದ ಮೇರಿಯಂಡ ಬೋಪಣ್ಣ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

