ನಮ್ಮ ಕೊಡಗು – ನಮ್ಮ ಗ್ರಾಮ

“ನಮ್ಮ ಕೊಡಗು – ನಮ್ಮ ಗ್ರಾಮ”

ನಮ್ಮ ಗ್ರಾಮದ ಅಭಿವೃದ್ಧಿಗಾಗಿ ನಾವು ಯಾವ ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು,ವಿವಿಧ ಸಮಸ್ಯೆಗಳ ನಿವಾರಣೆ, ಗ್ರಾಮ ವಿಕಾಸ ಮುಂತಾದ ಗ್ರಾಮಕ್ಕೆ ಅವಶ್ಯವಿರುವ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಗ್ರಾಮಾಭ್ಯುದಯ ಕಾರ್ಯಕ್ರಮಗಳಿಗೆ ಗ್ರಾಮಸ್ಥರ ಸಮುದಾಯ ಸಹಭಾಗಿತ್ವದ ಪ್ರತಿಧ್ವನಿಯಾಗಿ “ಸರ್ಚ್‌ ಕೂರ್ಗ್‌ ಮೀಡಿಯಾ” ಅರ್ಪಿಸುವ “ನಮ್ಮ ಕೊಡಗು-ನಮ್ಮ ಗ್ರಾಮ” ಪರಿಕಲ್ಪನೆಯ ಉದ್ದೇಶವಾಗಿದೆ.

“ಸರ್ಚ್‌ ಕೂರ್ಗ್‌ ಮೀಡಿಯಾ”ವು ವಿಶ್ಲೇಷಣಾತ್ಮಕ ಹಾಗೂ ಗ್ರಾಮೀಣ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿ 19 ವರ್ಷಗಳನ್ನು ಪೂರೈಸಿ 20ನೇ ವರ್ಷದತ್ತ ತನ್ನ ಪಯಣವನ್ನು ಮುಂದುವರೆಸಿದೆ.

ಕೊಡಗು ಜಿಲ್ಲೆಯು ಸಹಕಾರಿ ಆಂದೋಲನವನ್ನು ಬೆಳೆಸುವಲ್ಲಿ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ ಹಾಗಾಗಿ ಕೊಡಗಿನ ಸಹಕಾರ ಚಳುವಳಿಯ ದಾಖಲೆಗೊಂದು ವೇದಿಕೆಯಾಗಿ ಕೊಡಗಿನ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸಲು ಮತ್ತು ಅಂತರ್ಜಾಲದಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಲು “ಸರ್ಚ್‌ ಕೂರ್ಗ್‌ ಮೀಡಿಯಾ”ವು ಆನ್‌ಲೈನ್‌ ಡೈರೆಕ್ಟರಿಯನ್ನು ರಚಿಸಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಆ ನಿಟ್ಟಿನಲ್ಲಿ “ನಮ್ಮ ಕೊಡಗು – ನಮ್ಮ ಗ್ರಾಮ” ಎಂಬ ಪರಿಕಲ್ಪನೆಯಲ್ಲಿ ನಮ್ಮ ಕೊಡಗಿನ ಸರ್ವ ಗ್ರಾಮಗಳ ಅಭಿವೃದ್ಧಿಗಾಗಿ ನಾವು ಯಾವ ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು, ವಿವಿಧ ಸಮಸ್ಯೆಗಳ ನಿವಾರಣೆ, ಗ್ರಾಮ ವಿಕಾಸ ಮುಂತಾದ ಗ್ರಾಮಕ್ಕೆ ಅವಶ್ಯವಿರುವ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಗ್ರಾಮಾಭ್ಯುದಯ ಕಾರ್ಯಕ್ರಮಗಳಿಗೆ ಗ್ರಾಮಸ್ಥರ ಸಮುದಾಯ ಸಹಭಾಗಿತ್ವದ ಪ್ರತಿಧ್ವನಿಯಾಗಿ “ಸರ್ಚ್‌ ಕೂರ್ಗ್‌ ಮೀಡಿಯಾ” ವು “ನಮ್ಮ ಕೊಡಗು-ನಮ್ಮ ಗ್ರಾಮ” ಪರಿಕಲ್ಪನೆಯ ಆನ್‌ಲೈನ್‌ ವೇದಿಕೆಯನ್ನು ಸಿದ್ದಪಡಿಸಿದೆ.

ಕೊಡಗಿನ ರಾಜಕೀಯ ಕ್ಷೇತ್ರದಲ್ಲಿ ಭರವಸೆಯ ನಾಯಕಿ ಕುಪ್ಪಣಮಾಡ ನಿವ್ಯ ಕಾವೇರಮ್ಮ

  ಕೊಡಗಿನ ರಾಜಕೀಯ ಕ್ಷೇತ್ರದಲ್ಲಿ ಭರವಸೆಯ ನಾಯಕಿ ಕುಪ್ಪಣಮಾಡ ನಿವ್ಯ ಕಾವೇರಮ್ಮ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕುಪ್ಪಣಮಾಡ ನಿವ್ಯ ಕಾವೇರಮ್ಮ ಅವರು ಗ್ರಾಮೀಣಾಭಿವೃದ್ಧಿಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ದಕ್ಷ ನಾಯಕಿ. ಪ್ರಧಾನಿ ನರೇಂದ್ರ ಮೋದಿಯವರ 'ವಿಕಸಿತ ಭಾರತ'ದ ಸಂಕಲ್ಪವನ್ನು ಗ್ರಾಮ ಮಟ್ಟದಲ್ಲಿ ಸಾಕಾರಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಇವರು, ಇಂದು ರಾಜ್ಯದ ಗಮನ ಸೆಳೆದಿರುವ ಯುವ ನಾಯಕಿಯಾಗಿ ಹೊರಹೊಮ್ಮಿದ್ದಾರೆ. Grade-1ಪಂಚಾಯತ್ ಶ್ರೇಯಾಂಕ 90%ರಸ್ತೆಗಳ ಸುಧಾರಣೆ 100%ಶುದ್ಧ ಕುಡಿಯುವ ನೀರು [...]

ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ; ಕೊಕ್ಕಂಡ ನಮಿತಾ ಬಿದ್ದಪ್ಪ

ಕೊಕ್ಕಂಡ ನಮಿತಾ ಬಿದ್ದಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾತೂರು (Gram Panchayat: Hathur) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೊಕ್ಕಂಡ ನಮಿತಾ ಬಿದ್ದಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಕೊಕ್ಕಂಡ ನಮಿತಾ ಬಿದ್ದಪ್ಪರವರು “ ನನ್ನ ವಿವಾಹದ ನಂತರ ನನ್ನ ಪತಿಯ ತಂದೆ ಮಾವನವರಾದ ಕೊಕ್ಕಂಡ ಅಯ್ಯಪ್ಪನವರು ಆಗಿನ [...]

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು; ಸಣ್ಣುವಂಡ ಅಕ್ಕಮ್ಮಉತ್ತಪ್ಪ

ಸಣ್ಣುವಂಡ ಅಕ್ಕಮ್ಮ ಉತ್ತಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾತೂರು(Gram Panchayat: Hathur ) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಣ್ಣುವಂಡ ಅಕ್ಕಮ್ಮ ಉತ್ತಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಸಣ್ಣುವಂಡ ಅಕ್ಕಮ್ಮ ಉತ್ತಪ್ಪ “ನಮ್ಮ ಸಮಾಜಕ್ಕೆ ಸಮಯ ಕೊಡವುದು, ಸೇವೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಸಾಮಾಜಕ್ಕೆ ಮರಳಿ ಕೊಡಲು [...]

ಕಸ-ಪ್ಲಾಸ್ಟಿಕ್‌ ಮುಕ್ತ ಸ್ವಚ್ಚ ಮಾದರಿ ಗ್ರಾಮ ಮಾಡುವಲ್ಲಿ ನಮ್ಮ ಪ್ರಯತ್ನ; ಮೇಕೇರಿರ ಡಿ. ಅರುಣ್‌ ಕುಮಾರ್‌

ಮೇಕೇರಿರ ಡಿ. ಅರುಣ್‌ ಕುಮಾರ್‌, ಅಧ್ಯಕ್ಷರು: ಗ್ರಾ.ಪಂ. ಚೆನ್ನಯ್ಯನ ಕೋಟೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮೇಕೇರಿರ ಡಿ. ಅರುಣ್‌ ಕುಮಾರ್‌ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಮೇಕೇರಿರ ಡಿ. ಅರುಣ್‌ ಕುಮಾರ್ “ನನ್ನ ವಿದ್ಯಾಭ್ಯಾಸದ ನಂತರ ನಾನು ಉದ್ಯೋಗ ನಿಮಿತ್ತ ಬೆಂಗಳೂರಿನ ಮಧರ್‌ ಡೈರಿನಲ್ಲಿ 20 [...]

ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವಲ್ಲಿ ನನ್ನ ಕಾರ್ಯ ಸಾಗಿದೆ.; ಅಚ್ಚಪಂಡ ಎಂ. ಬೋಪಣ್ಣ(ದಿನೇಶ್)‌

ಅಚ್ಚಪಂಡ ಎಂ. ಬೋಪಣ್ಣ(ದಿನೇಶ್)‌, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬೇಟೋಳಿ(Grama Panchayat: Betoli) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೇಟೋಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಚ್ಚಪಂಡ ಎಂ. ಬೋಪಣ್ಣ(ದಿನೇಶ್)‌ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಅಚ್ಚಪಂಡ ಎಂ. ಬೋಪಣ್ಣ(ದಿನೇಶ್)‌ ರವರು “ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಲು ಕಾರಣವೇನೆಂದರೆ ನನ್ನ ತಂದೆಯವರಾದ ದಿವಂಗತ ಅಚ್ಚಪಂಡ ಎ.ಮೊಣ್ಣಪ್ಪನವರು ಭಾರತೀಯ ಸೇನೆಯಲ್ಲಿ [...]

ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ; ಅಬ್ದುಲ್ ಸಲಾಂ (ಸಲೀಂ)

ಅಬ್ದುಲ್ ಸಲಾಂ (ಸಲೀಂ), ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಹರದೂರು ಹರದೂರು ಗ್ರಾಮ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದಲ್ಲಿದ್ದು, ತಾಲ್ಲೂಕು ಕೇಂದ್ರ ಸ್ಥಾನದಿಂದ 24 ಕಿ.ಮೀ.ದೂರದಲ್ಲಿದೆ. ಹರದೂರು ಗ್ರಾಮ ಪಂಚಾಯಿತಿಯು 2 ಕಂದಾಯ ಗ್ರಾಮಗಳನ್ನು ಹೊಂದಿದ್ದು, 2 ಉಪ ಗ್ರಾಮಗಳನ್ನು ಹೊಂದಿದೆ. ಕಂದಾಯ ಗ್ರಾಮಗಳು 1) ಗರಗಂದೂರು 2) ಅಂಜನಗೇರಿ ಬೆಟ್ಟಗೇರಿ. ಉಪಗ್ರಾಮಗಳು 1) ಗರಗಂದೂರು ಬಿ 2)ಹರದೂರು. ಹರದೂರು ಗ್ರಾಮ ಪಂಚಾಯಿತಿಯಲ್ಲಿ [...]

ಅನುದಾನ ಹೆಚ್ಚಿಗೆ ದೊರೆತಲ್ಲಿ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಶ್ರಮಿಸುತ್ತೇವೆ; ಅಮ್ಮತ್ತಿರ ವಿ. ರಾಜೇಶ್

ಅಮ್ಮತ್ತಿರ ವಿ. ರಾಜೇಶ್, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬಿರುನಾಣಿ(Gram Panchayat: Birunani) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬಿರುನಾಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಮ್ಮತ್ತಿರ ವಿ.ರಾಜೇಶ್‌  ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಅಮ್ಮತ್ತಿರ ವಿ.ರಾಜೇಶ್‌ ರವರು “ನನ್ನ 18 ವಯಸ್ಸಿನ ನಂತರ ನಾನು ಪೂರ್ಣವಾಗಿ ಸಾಮಾಜಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದೆ. [...]

ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಿದ್ದೇನೆ; ಹೆಚ್‌.ಎನ್‌. ಪಳನಿ ಸ್ವಾಮಿ

ಹೆಚ್‌.ಎನ್‌. ಪಳನಿ ಸ್ವಾಮಿ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಸಿದ್ದಾಪುರ (Gram Panchayat: Siddapura) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎನ್.‌ ಪಳನಿಸ್ವಾಮಿ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಹೆಚ್.ಎನ್.‌ ಪಳನಿಸ್ವಾಮಿರವರು “ನಾನು ಮೊದಲು ವೃತ್ತಿಯಲ್ಲಿ ಟ್ಯಾಕ್ಷಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಹಾಗೆ ಸ್ವಂತ 2 ವಾಹನಗಳ  ಮಾಲೀಕನೂ [...]

ಚಿಕ್ಕ ಪಂಚಾಯಿತಿಯಾದರೂ ಗ್ರೇಡ್-1‌ ಪಂಚಾಯಿತಿಗಳಿಗಿಂತ ಕಮ್ಮಿ ಎನಿಸದೆ ಅಭಿವೃದ್ಧಿಯನ್ನು ಕಾಣುತ್ತಿದೆ; ಕೊಲ್ಲಿರ ಬೋಪ್ಪಣ್ಣ

ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬಿ.ಶೆಟ್ಟಿಗೇರಿ(Gram Panchayat: B. Shettigeri) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ ಅವರು “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆ ಎಂದರೆ ನಮ್ಮ ತಂದೆಯವರಾದ ಕೊಲ್ಲಿರ [...]

ಅನುದಾನಗಳನ್ನು ಅಭಿವೃದ್ಧಿಗೆ ಸದುಪಯೋಗಪಡಿಸಿದ ಆತ್ಮತೃಪ್ತಿ ನನ್ನಲ್ಲಿ ಇದೆ; ಚೆಕ್ಕೇರ ಸೂರ್ಯ ಅಯ್ಯಪ್ಪ

ಚೆಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ನಿಟ್ಟೂರು(Gram Panchayat: Nittur) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಚೆಕ್ಕೇರ ಸೂರ್ಯ ಅಯ್ಯಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಚೆಕ್ಕೇರ ಸೂರ್ಯ ಅಯ್ಯಪ್ಪರವರು “1962ರಲ್ಲಿ ಗ್ರಾಮ ಪಂಚಾಯಿತಿ ಎಂಬ ಸ್ಥಳೀಯ ಸಂಸ್ಥೆಗಳ ಆಡಳಿತ ಪ್ರಾರಂಭವಾದ ವರ್ಷಗಳಲ್ಲಿ ನಮ್ಮ ನಿಟ್ಟೂರಿನ ಗ್ರಾಮದಲ್ಲಿ [...]

ನಿವೇಶನ ರಹಿತರಿಗೆ ಸ್ವಂತ ಮನೆ ನಿರ್ಮಿಸಿಕೊಡಲು ಪ್ರಾಮಾಣಿಕ ಪ್ರಯತ್ನ; ಹೆಚ್. ಎ. ಹಂಸ (ಹರಿಶ್ವಂದ್ರ)

ಹೆಚ್. ಎ. ಹಂಸ (ಹರಿಶ್ವಂದ್ರ), ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹೊದ್ದೂರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹೊದ್ದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎ. ಹಂಸ(ಹರಿಶ್ಚಂದ್ರ) ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಹೆಚ್.ಎ. ಹಂಸ(ಹರಿಶ್ಚಂದ್ರ) “ನನ್ನ ಬಾಲ್ಯದಲ್ಲಿ 9-10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುವಾಗಲೇ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಪ್ರಾರಂಭವಾಯಿತು. ರಾಜಕೀಯ ಸುದ್ದಿಗಳನ್ನು ಓದಿ, [...]

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರದ ಬಗ್ಗೆ ಹೆಜ್ಜೆಯಿಟ್ಟ್ಟಿದ್ದೇವೆ; ವಿನೋದ್.‌ ಜಿ.ಕೆ.

ವಿನೋದ್.‌ ಜಿ.ಕೆ, ಅಧ್ಯಕ್ಷರು: ಗ್ರಾ.ಪಂ. ಐಗೂರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಐಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿನೋದ್.‌ ಜಿ.ಕೆ. ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ವಿನೋದ್‌ .ಜಿ.ಕೆ. “ “ನಾನು ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣವೇನೆಂದರೆ ನಾನು ಈ ಮೊದಲು ರಾಷ್ರ್ಟೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದು, ಗ್ರಾಮದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯನಾಗಿದ್ದೆ, [...]

ಡಿಜಿಟಲ್‌ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇನೆ; ಯಶಾಂತ್‌ ಕುಮಾರ್‌ ಡಿ.ಕೆ.

ಯಶಾಂತ್‌ ಕುಮಾರ್‌ ಡಿ.ಕೆ, ಅಧ್ಯಕ್ಷರು: ಗ್ರಾ.ಪಂ. ಹಾನಗಲ್ಲು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯಶಾಂತ್‌ ಕುಮಾರ್‌ ಡಿ.ಕೆ. ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಯಶಾಂತ್‌ ಕುಮಾರ್‌ ಡಿ.ಕೆ. ರವರು “ನಾನು ವಿದೇಶದಲ್ಲಿ ಇಂಜಿನಿಯರ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ನನ್ನ ತಂದೆಯವರು 2009ರಲ್ಲಿ ತೀರಿಕೊಂಡರು. ನಂತರ ನಾನು 2013ರಲ್ಲಿ ಸ್ವದೇಶಕ್ಕೆ [...]

ಗ್ರಾಮದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನನ್ನ ಗುರಿಯಾಗಿದೆ; ತಾರಾ ಸುಧೀರ್‌

‌ ತಾರಾ ಸುಧೀರ್‌,ಅಧ್ಯಕ್ಷರು: ಗ್ರಾ.ಪಂ. ಕಿರಗಂದೂರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಕಿರಗಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ತಾರಾ ಸುಧೀರ್ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ‌ ತಾರಾ ಸುಧೀರ್ “ನಾನು ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆಯೆಂದರೆ, ನನ್ನ ಗ್ರಾಮವನ್ನು ಹೆಚ್ಚಿನ ಮಟ್ಟದಲ್ಲಿ ವ್ಯವಸ್ಥಿತವಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಯತ್ತ ಮುನ್ನಡೆಸುವುದಾಗಿತ್ತು. [...]

ನಮ್ಮ ಗ್ರಾಮವನ್ನು ಇನ್ನಷ್ಟು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಹೆಜ್ಜೆಯಿಟ್ಟಿದ್ದೇನೆ; ಸುರೇಶ್‌ ಟಿ.ಬಿ

ಸುರೇಶ್‌ ಟಿ.ಬಿ, ಸದಸ್ಯರು: ಗ್ರಾ.ಪಂ. ಗರ್ವಾಲೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಗರ್ವಾಲೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್‌ ಟಿ.ಬಿ. ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಸುರೇಶ್‌ ಟಿ.ಬಿ. “ನಾನು ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರಕ್ಕೆ ಬರಲು ಕಾರಣವೇನೆಂದರೆ ನಾನು ಈ ಮೊದಲು ರಾಷ್ರ್ಟೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದು, ಗ್ರಾಮದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯನಾಗಿದ್ದೆ, ನನ್ನ [...]

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಪ್ರಯತ್ನ; ಮರುವಂಡ ಮಾದಪ್ಪ ಬೆಳ್ಳಿಯಪ್ಪ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಪ್ರಯತ್ನ; ಮರುವಂಡ ಮಾದಪ್ಪ ಬೆಳ್ಳಿಯಪ್ಪ ಮರುವಂಡ ಮಾದಪ್ಪ ಬೆಳ್ಯಪ್ಪ, ಉಪಾಧ್ಯಕ್ಷರು: ಗ್ರಾ.ಪಂ. ಕಿರಗಂದೂರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಕಿರಗಂದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮರುವಂಡ ಮಾದಪ್ಪ ಬೆಳ್ಯಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಮರುವಂಡ ಮಾದಪ್ಪ ಬೆಳ್ಯಪ್ಪನವರು ನನ್ನ ಅಜ್ಜ ಮರುವಂಡ ಬಸಪ್ಪ, ಅಂದಿನ ದಿನಗಳಲ್ಲಿ ಗ್ರಾಮದ [...]

ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್‌

ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್‌  ಪೆಮ್ಮಂಡ ಕಾವೇರಮ್ಮ ದಿನೇಶ್‌: ಅಧ್ಯಕ್ಷರು ಗ್ರಾ.ಪಂ. ನರಿಯಂದಡ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪೆಮ್ಮಂಡ ಕಾವೇರಮ್ಮ ದಿನೇಶ್‌ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಪೆಮ್ಮಂಡ ಕಾವೇರಮ್ಮ ದಿನೇಶ್‌ ರವರು “ನಾನು ರಾಜಕೀಯ [...]

ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್‌ ನಾಣಯ್ಯ

ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್‌ ನಾಣಯ್ಯ ಕೋಡಿರ ಎಂ. ವಿನೋದ್‌ ನಾಣಯ್ಯ, ಉಪಾಧ್ಯಕ್ಷರು: ಗ್ರಾ.ಪಂ. ನರಿಯಂದಡ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೋಡಿರ ವಿನೋದ್‌ ನಾಣಯ್ಯ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ವಿನೋದ್‌ ನಾಣಯ್ಯನವರು, “ನಾನು ರಾಜಕೀಯ ಕ್ಷೇತ್ರಕ್ಕೆ [...]

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಆದ್ಯತೆ; ಬೈತಡ್ಕ ಡೆಲಿವಿ ದೇವಯ್ಯ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಆದ್ಯತೆ; ಬೈತಡ್ಕ ಡೆಲಿವಿ ದೇವಯ್ಯ ಬೈತಡ್ಕ ಡೆಲಿವಿ ದೇವಯ್ಯ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಬೆಟ್ಟಗೇರಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬೈತಡ್ಕ ಡೆಲಿವಿ‌ ಎಸ್. ದೇವಯ್ಯ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಬೈತಡ್ಕ ಡೆಲಿವಿ ದೇವಯ್ಯರವರು “ನಾನು ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಮಾಜಿ [...]

ಪಂಚಾಯಿತಿ ಅಭಿವೃದ್ಧಿಗೆ ನನ್ನ ಕನಸುಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ; ಪಟ್ಟಮಾಡ ಮಿಲನ್‌ ಮುತ್ತಣ್ಣ

ಪಟ್ಟಮಾಡ ಮಿಲನ್‌ ಮುತ್ತಣ್ಣ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬೇಂಗೂರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೇಂಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪಟ್ಟಮಾಡ ಮಿಲನ್‌ ಮುತ್ತಣ್ಣ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಪಟ್ಟಮಾಡ ಮಿಲನ್‌ ಮುತ್ತಣ್ಣ “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯವಾದ ಪ್ರೇರಣೆ ಎಂದರೆ ನನ್ನ ಪತಿಯಾದ ಪಿ.ಡಿ. ಮುತ್ತಣ್ಣ ಹಾಗೂ ಗ್ರಾಮಸ್ಥರು. [...]

ಮಾದರಿ ಗ್ರಾಮ  ಪಂಚಾಯಿತಿಯಾಗಿ ಮಾಡುವ ನಿಟ್ಟಿನಲ್ಲಿ ನನ್ನ ಹೆಜ್ಜೆ; ಪಂದಿಕಂಡ ದಿನೇಶ್ (ಕುಶ)

ಪಂದಿಕಂಡ ದಿನೇಶ್ (ಕುಶ),  ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾಲುಗುಂದ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾಲುಗುಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪಂದಿಕಂಡ ದಿನೇಶ್(ಕುಶ) ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಪಂದಿಕಂಡ ದಿನೇಶ್(ಕುಶ) ರವರು, “ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿಗೆ ನನ್ನಿಂದ ಆಗುವ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ [...]

ರಾಜಕೀಯದ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ವಂದಿಸಬೇಕೆಂಬ ಉದ್ದೇಶವಿದೆ; ಕವಿತಾ ಚಂದ್ರ ಪ್ರಕಾಶ್

ಶ್ರೀಮತಿ ಕವಿತಾ ಚಂದ್ರ ಪ್ರಕಾಶ್, ಉಪಾಧ್ಯಕ್ಷರು: ಮರಗೋಡು ಗ್ರಾಮ ಪಂಚಾಯತಿಯ  ಮರಗೋಡು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿರುವ ಒಂದು ಗ್ರಾಮ, ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರದಿಂದ 16 ಕಿಮೀ ದೂರದಲ್ಲಿದೆ. ಮರಗೋಡು ಗ್ರಾಮ ಪಂಚಾಯತಿಯು ಕಟ್ಟೆಮಾಡು ಎಂಬ ಉಪಗ್ರಾಮವನ್ನು ಹೊಂದಿದೆ. ಇಲ್ಲಿನ ಜನಪ್ರತಿನಿಧಿಗಳ ಪ್ರಕಾರ ಸುಮಾರು 5000 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಹೆಚ್ಚಾಗಿ ಅರೆಭಾಷಿಕ ಗೌಡ ಹಾಗೂ ಕೊಡವ ಜನಾಂಗದವರಿದ್ದು, ಉಳಿದಂತೆ ಮೋಗೇರ, ಬಿಲ್ಲವ, ಮಲಯಾಳಿ(ತಿಯನ್) ಮೊದಲಾದ [...]

ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯುವುದು ನನ್ನ ಕನಸಾಗಿದೆ; ಈ.ಬಿ. ಜೋಸೆಫ್

ಈ.ಬಿ. ಜೋಸೆಫ್,  ಅಧ್ಯಕ್ಷರು: ಗ್ರಾಮ ಪಂಚಾಯಿತಿ 7ನೇ ಹೊಸಕೋಟೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಒಂದೇ ಕಂದಾಯ ಗ್ರಾಮವನ್ನು ಹೊಂದಿದ್ದು ಭಾಗ-1, ಭಾಗ-2, ಭಾಗ-3. ಎಂಬ ಮುರು ವಾರ್ಡುಗಳಿರುತ್ತೆದೆ. 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯು ಬಿ.ಎಂ ರಸ್ತೆ ಬದಿಯಲ್ಲಿದ್ದು ಕೇಂದ್ರ ಸ್ಥಾನ ಮಡಿಕೇರಿಗೆ 20.ಕಿ.ಮೀ. ಹೋಬಳಿ ಕಛೇರಿ ಸುಂಟಿಕೊಪ್ಪಕ್ಕೆ 5.ಕಿ.ಮೀ, ಕುಶಾಲನಗರಕ್ಕೆ 10.ಕಿ.ಮೀ, ಸೋಮವಾರಪೇಟೆ ತಾಲ್ಲೂಕು ಕಛೇರಿಗೆ 42.ಕಿ.ಮೀ ದೂರವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿಯು ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ ಮತ್ತು ಗುಡ್ಡೆಹೊಸೊರು ಗ್ರಾಮ ಪಂಚಾಯಿತಿಗಳ [...]

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಮತ್ತು ರಸ್ತೆಯ ವ್ಯವಸ್ಥೆ ಶೇ.100% ಮಾಡಬೇಕೆಂಬ ಕನಸಿದೆ; ತಾತೇರ ಉಷಾ ಪೊನ್ನಪ್ಪ

ತಾತೇರ ಉಷಾ ಪೊನ್ನಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹರದೂರು ಹರದೂರು ಗ್ರಾಮ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದಲ್ಲಿದ್ದು, ತಾಲ್ಲೂಕು ಕೇಂದ್ರ ಸ್ಥಾನದಿಂದ 24 ಕಿ.ಮೀ.ದೂರದಲ್ಲಿದೆ. ಹರದೂರು ಗ್ರಾಮ ಪಂಚಾಯಿತಿಯು 2 ಕಂದಾಯ ಗ್ರಾಮಗಳನ್ನು ಹೊಂದಿದ್ದು, 2 ಉಪ ಗ್ರಾಮಗಳನ್ನು ಹೊಂದಿದೆ. ಕಂದಾಯ ಗ್ರಾಮಗಳು 1) ಗರಗಂದೂರು 2) ಅಂಜನಗೇರಿ ಬೆಟ್ಟಗೇರಿ. ಉಪಗ್ರಾಮಗಳು 1) ಗರಗಂದೂರು ಬಿ 2)ಹರದೂರು. ಹರದೂರು ಗ್ರಾಮ ಪಂಚಾಯಿತಿಯಲ್ಲಿ [...]

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಯಾವ ಕುಟುಂಬವೂ ವಸತಿ ರಹಿತರಾಗಿರಬಾರದು ಎಂಬುದು ನನ್ನ ಕನಸಾಗಿದೆ; ಪಿ.ಆರ್. ಸುನಿಲ್ ಕುಮಾರ್

ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷರು: ಗ್ರೇಡ್ ಒನ್ ಗ್ರಾಮ ಪಂಚಾಯಿತಿ ಸುಂಟಿಕೊಪ್ಪ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯತಿ ಯಾಗಿದೆ. ಸುಂಟಿಕೊಪ್ಪ ಬ್ರಿಟಿಷರ ಕಾಲದಲ್ಲಿ ಒಪತ್ತಿನ ಸಂತೆ ನಡೆಯುತ್ತಿದ್ದರಿಂದ ಸಾಂಟಿಕೊಪ್ಪ ಎಂದು ಕರೆಯುತ್ತಿದ್ದರು. ಸಂತೆಕೊಪ್ಪ ಎಂಬುದರ ಅನ್ವರ್ಥ ನಾಮವೇ ಈಗಿನ ಸುಂಟಿಕೊಪ್ಪ ಎಂದು ತಿಳಿದು ಬಂದಿದೆ. ಸುಂಟಿಕೊಪ್ಪಕ್ಕೆ ಉಲುಗುಲಿ ಎಂಬ ಹೆಸರು ಬಂದಿದು ಹುಲಿ ಮತ್ತು ಗೂಳಿಗಳ ಕಾದಾಟದಲ್ಲಿ ಗೂಳಿಯೇ ಹುಲಿಯನ್ನು ಕೊಂದು ಹಾಕಿದ ಕಥೆ ಇದೆ. ಹುಲಿಗುಲಿ ಎಂಬುದರ ಅನ್ವರ್ಥ [...]

ಗ್ರಾಮದ ಪ್ರಗತಿಗೆ ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಯಿಟ್ಟಿದ್ದೇವೆ; ಮುಂಡಚಾಡಿರ. ಕೆ. ಭರತ್‌

ಮುಂಡಚಾಡಿರ. ಕೆ. ಭರತ್‌, ಅಧ್ಯಕ್ಷರು: ಗ್ರಾಮ ಪಂಚಾಯಿತಿ, ಕದನೂರು. ಕೊಡಗು ಜಿಲ್ಲೆಯ ಮಡಿಕೇರಿಯಿಂದ-ವೀರಾಜಪೇಟೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ವಿರಾಜಪೇಟೆಗೆ ಐದು ಕೀಲೋ ಮೀಟರ್‌ ಅಂತರದಲ್ಲಿ ನಾಪೋಕ್ಲು ಪಟ್ಟಣಕ್ಕೆ ಸಂಪರ್ಕಿಸುವ ಮಾರ್ಗದ ಪಕ್ಕದಲ್ಲಿ ಇರುವ ಪಂಚಾಯಿತಿ ಕದನೂರು ಗ್ರಾಮ ಪಂಚಾಯಿತಿ. ಈ ಪಂಚಾಯಿತಿಯು ವೀರಾಜಪೇಟೆ ತಾಲ್ಲೂಕಿನಲ್ಲಿದೆ. ಕದನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ  ಮುಂಡಚಾಡಿರ. ಕೆ. ಭರತ್‌ರವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ [...]

ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ದಿಯೆಡೆಗೆ ನನ್ನಚಿತ್ತ; ಎನ್. ಬಾಲಚಂದ್ರನ್ ನಾಯರ್

ಎನ್. ಬಾಲಚಂದ್ರನ್ ನಾಯರ್, ಅಧ್ಯಕ್ಷರು:  ಗ್ರಾಮ ಪಂಚಾಯಿತಿ, ಕರಿಕೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ಭಾಗಮಂಡಲ ಮಾರ್ಗವಾಗಿ ಕೇರಳ ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಒಂದು ಸುಂದರ ಗ್ರಾಮ ಕರಿಕೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲೊಂದಾದ ಕರಿಕೆ ಗ್ರಾಮ ಪಂಚಾಯಿತಿಯು ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿರುತ್ತದೆ. ಮಡಿಕೇರಿಯಿಂದ ಕೇರಳ-ಮಂಗಳೂರು ಹೆದ್ದಾರಿಯಲ್ಲಿ 70ಕಿ.ಮೀ.ದೂರದಲ್ಲಿ ಇದ್ದು ಪಂಚಾಯಿತಿ ವಿಸ್ತೀರ್ಣವು 6874 ಹೆಕ್ಟೇರ್ ಆಗಿರುತ್ತದೆ. ಸದ್ರಿ ಗ್ರಾಮ ಪಂಚಾಯಿತಿಯಲ್ಲಿ ಕರಿಕೆ ಗ್ರಾಮ ಮಾತ್ರ ಕಂದಾಯ ಗ್ರಾಮವಾಗಿದ್ದು 4 ವಾರ್ಡ್ ಗಳನ್ನು ಹೊಂದಿರುತ್ತದೆ. [...]

ಟಿ.ವಿ. ಗಣೇಶ

ಗ್ರಾಮದ ವಸತಿ ರಹಿತರಿಗೆ ವಸತಿ ಕಲ್ಪಿಸುವಲ್ಲಿ ನನ್ನ ಮೊದಲ ಪ್ರಯತ್ನ; ಟಿ.ವಿ. ಗಣೇಶ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪ್ರಸಿದ್ಧ ದೇವಾಲಯ ಬೈರಂಬಾಡ ಸುಬ್ರಹ್ಮಣ್ಯ ದೇವಾಲಯದ ಅನತಿ ದೂರದಲ್ಲಿರುವ ಅಮ್ಮತಿ ಒಂಟಿಯಂಗಡಿ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಟಿ.ವಿ.ಗಣೇಶರವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಟಿ.ವಿ.ಗಣೇಶರವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು. ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಕರ್ತರಾಗಿ [...]

ಕಲಿಯಂಡ ಸಂಪನ್ ಅಯ್ಯಪ್ಪ

ಗ್ರಾಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮತೋಲನ ಮೂಡುವಂತೆ ಶ್ರಮಿಸುತ್ತಿದ್ದೇನೆ; ಕಲಿಯಂಡ ಸಂಪನ್ ಅಯ್ಯಪ್ಪ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ .ಪ್ರಸ್ತುತ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕಲಿಯಂಡ ಸಂಪನ್ ಅಯ್ಯಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ  ಕಲಿಯಂಡ ಸಂಪನ್ ಅಯ್ಯಪ್ಪನವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ [...]

ಗುಮ್ಮಟ್ಟಿರ ದರ್ಶನ್ ನಂಜಪ್ಪ

ಗ್ರಾಮದ ಸರ್ವರಿಗೂ ಮೂಲಭೂತ ಸೌಕರ್ಯಗಳು ದೊರಕುವಂತೆ ಮಾಡುವ ನಿಟ್ಟಿನಲ್ಲಿ ನನ್ನ ಪ್ರಯತ್ನ; ಗುಮ್ಮಟ್ಟಿರ ದರ್ಶನ್ ನಂಜಪ್ಪ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಹಾತೂರು ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರ ಮಡಿಕೇರಿಯಿಂದ  44 ಕಿ.ಮೀ. ದೂರದಲ್ಲಿದೆ. ಪ್ರಸ್ತುತ ಹಾತೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಗುಮ್ಮಟ್ಟಿರ ದರ್ಶನ್ ನಂಜಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ  ಗುಮ್ಮಟ್ಟಿರ ದರ್ಶನ್ ನಂಜಪ್ಪನವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಲಾಯಿತು. [...]

ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ

 ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯತ್ತ ನನ್ನ ಹೆಜ್ಜೆ; ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ನರಿಯಂದಡ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ .ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ. ಪ್ರಸ್ತುತ ನರಿಯಂದಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯನವರು ಕಾರ್ಯನಿರ್ವಹಿಸುತ್ತಿದ್ದಾರೆ. ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ  ಬಿದ್ದಂಡ  ಎಂ. ರಾಜೇಶ್ ಅಚ್ಚಯ್ಯನವರನ್ನು “ಸರ್ಚ್‌ ಕೂರ್ಗ್‌ [...]

SHANTHALLI ಶಾಂತಳ್ಳಿ

ಶಾಂತಳ್ಳಿ - SHANTHALLI ಶಾಂತಳ್ಳಿ ಗ್ರಾಮ ಪಂಚಾಯಿತಿ ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿದ್ದು.ಬೆಟ್ಟಗುಡ್ಡಗಳಿಂದ ಕೂಡಿದೆ.ಶಾಂತಳ್ಳಿ ಮಾರ್ಗವಾಗಿ ಸಕಲೇಶಪುರ ,ಸುಬ್ರಮಣ್ಯ ಮತ್ತು ಧರ್ಮಸ್ಥಳ ಕ್ಕೆ ಹೋಗಬಹುದು. ಸಮೀಪದಲ್ಲಿಯೇ ಮಲ್ಲಳ್ಳಿ ಫಾಲ್ಸ್ ,ಪುಷ್ಪಗಿರಿ ದೇವಸ್ಥಾನವು 12 ಕಿ.ಮೀ ದೂರದಲ್ಲಿದೆ. ಈ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮಗಳನ್ನು ಹೊಂದಿದೆ. ಹರಗ,ಅಬ್ಬಿಮಠಬಾಚಳ್ಳಿ,ಶಾಂತಳ್ಳಿಮತ್ತು ತಲ್ತಾರೆಶೆಟ್ಟಳ್ಳಿ .ಶಾಂತಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಆಸ್ಪತ್ರೆ,ಕಂದಾಯ ಇಲಾಖೆ, ಕೃಷಿ ಇಲಾಖೆ,ಬ್ಯಾಂಕು,ಸಹಕಾರ ಬ್ಯಾಂಕ್ ಪಶು ಆರೋಗ್ಯ ಇಲಾಖೆ ,ವಿದ್ಯುತ್ ಇಲಾಖೆ ಮತ್ತು ಜೇನುಕೃಷಿ ಇಲಾಖೆ [...]

SHANIVARASANTHE ಶನಿವಾರಸಂತೆ

ಶನಿವಾರಸಂತೆ - Shanivarasanthe ಶನಿವಾರಸಂತೆಯು ಭಾರತದ ಮಹಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಜನರಲ್ ಕೆ.ಎಂ. ಕಾರ್ಯಪ್ಪನವರು ಜನಿಸಿದ ಸ್ಥಳವಾಗಿರುತ್ತದೆ. ಶನಿವಾರಸಂತೆಯು ಹೆಮ್ಮನೆ, ಸುಳುಗಳಲೆ, ಚಿಕ್ಕಕೊಳತ್ತೂರು, ಮತ್ತು ಬಿದರೂರು ಈ ಪ್ರದೇಶಗಳನ್ನೊಳಗೊಂಡ ಗ್ರಾಮವಾಗಿದ್ದು, ಇಲ್ಲಿ ಪ್ರತೀ ಶನಿವಾರ ಸಂತೆ ನಡೆಯುತ್ತಿದ್ದ ಕಾರಣದಿಂದಾಗಿ ಶನಿವಾರಸಂತೆ ಎಂಬ ಹೆಸರು ಬಂದಿರುತ್ತದೆ. ಪತ್ರಿಕಾ ರಂಗದಲ್ಲಿಯೂ ಸಹಾ ಶನಿವಾರಸಂತೆಯು ಕೊಡಗು ಜಿಲ್ಲೆಗೆ ಪ್ರಥಮವಾಗಿದ್ದು, ಕೊಡಗು ಚಂದ್ರಿಕೆ ಎಂಬ ಪತ್ರಿಕೆಯು ಪ್ರಪ್ರಥಮವಾಗಿ ಶನಿವಾರಸಂತೆಯಲ್ಲಿ ಮುದ್ರಿತವಾಗಿರುವ ಪತ್ರಿಕೆಯಾಗಿರುತ್ತದೆ. ಶನಿವಾರಸಂತೆಯು 1954 ರಲ್ಲಿ ನೋಟಿಫೈಡ್ ಏರಿಯಾವಾಗಿ ಸ್ಥಾಪನೆಯಾಗಿ, [...]

KODAGARAHALLI ಕೊಡಗರಹಳ್ಳಿ

ಕೊಡಗರಹಳ್ಳಿ - KODAGARAHALLI ಕೊಡಗು ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳ ಪೈಕಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಒಂದಾಗಿದ್ದು,ಕೊಡಗು ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.ಈ ಮೊದಲಿಗೆ ಮಂಡಲ ಪಂಚಾಯಿತಿ ಆಗಿದ್ದು,ತದಾ ನಂತರ ಗ್ರಾಮ ಪಂಚಾಯಿತಿ ಆಗಿ ಪರಿವರ್ತನೆಗೊಂಡಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಜಿಲ್ಲೆಯ ಪ್ರಮುಖ ಕೇಂದ್ರವಾದ ಮಡಿಕೇರಿಯಿಂದ 18ಕೀಮೀ ಅಂತರದಲ್ಲಿದೆ ಹಾಗೂತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 33ಕೀಮೀ ಅಂತರವಾಗಿದ್ದು,ಹೋಬಳಿ ಕೇಂದ್ರವಾದ ಸುಂಟಿಕೊಪ್ಪದಿಂದ 4ಕೀಮೀ ಅಂತರದಲ್ಲಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಅಂದಗೋವೆ,ಕಲ್ಲೂರು ಹಾಗೂ ಕೊಡಗರಹಳ್ಳಿ ಗ್ರಾಮವನ್ನು ಒಳಗೊಂಡಿದೆ.ಈ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ,ಕಾರ್ಯದರ್ಶಿ [...]

GOWDALLI ಗೌಡಳ್ಳಿ

ಗೌಡಳ್ಳಿ - GOWDALLI ಪಶ್ಚಿಮಘಟ್ಟದ ಹಸಿರಿನ ಕಂಗಳ ಸ್ವಚ್ಚಂದ ನೈಸರ್ಗಿಕ ರಮಣೀಯ ತಾಣವಾದ ಗೌಡಳ್ಳಿ ಗ್ರಾಮ ಪಂಚಾಯಿತಿಯು ಶನಿವಾರಸಂತೆ ಹೋಬಳಿ ಸೋಮವಾರಪೇಟೆ ತಾಲೋಕು ಕೊಡಗುಜಿಲ್ಲೆಯಲ್ಲಿರುತ್ತದೆ.ಹೋಬಳಿ ಮತ್ತು ತಾಲ್ಲೋಕು ಕೇಂದ್ರದ ಮಾರ್ಗಮದ್ಯ 10 ಕಿ.ಮೀಟರ್ ಗಳ ಮತ್ತು ಜಿಲ್ಲಾ ಕೇಂದ್ರದಿಂದ 40 ಕಿ.ಮೀಟರುಗಳ ಅಂತರದಲ್ಲಿದೆ. ನಮ್ಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 5 ಕಂದಾಯ ಗ್ರಾಮಗಳಾದ ಗೌಡಳ್ಳಿ,ನಂದಿಗುಂದ,ಹೆಗ್ಗಳ,ಚೆನ್ನಾಪುರ,ಶುಂಠಿ, 14 ಉಪಗ್ರಾಮಗಳಾದ ಕೂಗೂರು,ಚಿಕ್ಕಾರ,ಕೋಟೆಊರು,ಅಜ್ಜಳ್ಳಿ,ಶಾಂತ್ವೇರಿ,ರಾಮನಹಳ್ಳಿ,ಕುರುಡುವಳ್ಳಿ,ಗೊಂದಳ್ಳಿ, ಬಸವನಕೊಪ್ಪ,ಹಾರಳ್ಳಿ,ಹಿರಿಕರ,ಶಿವಪುರ,ಕೊರ್ಲಳ್ಳಿ,ಶುಂಠಿಮಂಗಳೂರು ಗ್ರಾಮಗಳಿವೆ. ಗೌಡಳ್ಳಿಯಲ್ಲಿ 1 ಅನುದಾನಿತ ಪ್ರೌಢಶಾಲೆ,ನಂದಿಗುಂದ ಮತ್ತು ಗೌಡಳ್ಳಿಯಲ್ಲಿ ತಲಾ ಒಂದೊಂದು ಸರ್ಕಾರಿ ಹಿರಿಯ ಪ್ರಾಥಮಿಕ [...]

DUNDALLI ದುಂಡಳ್ಳಿ

ದುಂಡಳ್ಳಿ - DUNDALLI ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯವು ಶನಿವಾರಸಂತೆ ಹೋಬಳಿಗೆ ಸೇರಿದ್ದು ಸೋಮವಾರಪೇಟೆ ತಾಲೋಕಿನಿಂದ 21 ಕೀ.ಮೀ ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯು 21 ಗ್ರಾಮಗಳನ್ನು ಹೊಂದಿದ್ದು ದುಂಡಳ್ಳಿ ಕ್ಷೇತ್ರ, ಮಾದ್ರೆ ಕ್ಷೇತ್ರ, ದೊಡ್ಡಕೊಳತ್ತೂರು ಕ್ಷೇತ್ರಗಳೆಂಬ 3 ಚುನಾವಣಾ ಕ್ಷೇತ್ರಗಳನ್ನು ಒಳಗೊಂಡಿದೆ. ದುಂಡಳ್ಳಿ , ಬಿದರೂರು, ಕಾಜೂರು, ದೊಡ್ಡಕೊಳತ್ತೂರು, ಮಾದ್ರೆ, ದೊಡ್ಡಬಿಳಹ ,ಚೀಕನಹಳ್ಳಿ ಗಳೆಂಬ 7 ಮುಖ್ಯ ಗ್ರಾಮಗಳನ್ನು, ಹಾಲ್ಕೆನೆ.ತೋಯಳ್ಳಿ, ಹೆಮ್ಮನೆ, ಸುಳುಗಳಲೆ, ಚಿಕ್ಕೊಳತ್ತೂರು, ಜಾಬೀಕೋಡಿ, ಅಪ್ಪಶೆಟ್ಟಳ್ಳಿ, ಶೆಟ್ಟಿಗನಹಳ್ಳಿ, ದಂಡಳ್ಳಿ, ಮಾದ್ರೆಹೊಸಳ್ಳಿ, ಕೂಜಗೇರಿ ಎಡೇಹಳ್ಳಿ, ಕಿರಿಬಿಳಹ, ಚನ್ನಾಪುರ [...]

CHETTALLI ಚೆಟ್ಟಳ್ಳಿ

ಚೆಟ್ಟಳ್ಳಿ - Chettalli ಚೆಟ್ಟಳ್ಳಿ ಗ್ರಾಮ ಪಂಚಾಯ್ತಿಯು ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಸುಂಠಿಕೊಪ್ಪ ಮತ್ತು ಕುಶಾಲನಗರ ಹೋಬಳಿಗೆ ಸೇರಿದ ಗ್ರಾಮ ಪಂಚಾಯ್ತಿಯಾಗಿರುತ್ತದೆ.ಗ್ರಾಮ ಪಂಚಾಯ್ತಯು ಒಟ್ಟು 3485 ಹೆಕ್ಟೇರ್ ವಿರ್ಸಿಣವನ್ನು ಹೊಂದಿರುತ್ತದೆ ಸಮುದ್ರ ಮಟ್ಟದಿಂದ 6008ಕಿ.ಮೀ. ಎತ್ತರದಲ್ಲಿ ಇರುತ್ತದೆ. 2001ರ ಸಾಲಿನ ಜನಗಣತಿಯಂತೆ 6906 ಜನಸಂಖ್ಯೆಯನ್ನು ಹೊಂದಿದ್ದು, ಗ್ರೇಡ್ 1 ಗ್ರಾಮ ಪಂಚಾಯ್ತಿಯಾಗಿರುತ್ತದೆ. ಸುತ್ತಲು ಬೆಟ್ಟಗುಡ್ಡಗಳಿಂದ ಕೂಡಿದ್ದು ಜಿಲ್ಲಾಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುತ್ತದೆ. ಪಂಚಾಯ್ತಿಯ ಗಡಿ ಭಾಗದಿಂದ ಮಡಿಕೇರಿ ತಾಲ್ಲೂಕಿನ ಕಡಗದಾಳು, ಮರುಗೋಡು, ಪಂಚಾಯ್ತಿಗಳಿಗೆ ಸಂಪರ್ಕವನ್ನು ಹೊಂದಿರುತ್ತದೆ. [...]

BYADAGOTTA ಬ್ಯಾಡಗೊಟ್ಟ

ಬ್ಯಾಡಗೊಟ್ಟ - BYADAGOTTA ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯು 1994ರಲ್ಲಿ ಆರಂಭವಾಯಿತು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾವಸಾಯಗಾರರು ಇರುತ್ತಾರೆ.ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ತಾಲ್ಲೂಕು ಕೇಂದ್ರ ಸೋಮವಾರಪೇಟೆಯಿಂದ ಸುಮಾರು 33 ಕಿ.ಮೀ. ದೂರದಲ್ಲಿದೆ.ಮಡಿಕೇರಿ-ಸಕಲೇಶಪುರ ರಾಜ್ಯ ಹೆದ್ದರಿಯ ಬದಿಯಲ್ಲಿ ಅಂದರೆ ಶನಿವಾರಸಂತೆಯಿಂದ ಕೊಡ್ಲಿಪೇಟೆಗೆ ತೆರಳುವ ಮಾರ್ಗದಲ್ಲಿ ಗ್ರಾಮ ಪಂಚಾಯಿತಿ ಕಛೇರಿಇದೆ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಒಟ್ಟು ವಿಸ್ತೀರ್ಣ 1753 ಮತ್ತು ಸಾಗುವಳಿ ವಿಸ್ತೀರ್ಣ 1472. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಟ್ಟು 15 ಗ್ರಾಮಗಳಿದ್ದು [...]

BETTADALLI ಬೆಟ್ಟದಳ್ಳಿ

ಬೆಟ್ಟದಳ್ಳಿ - BETTADALLI ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯು ಹೆಕ್ಟೇರ್9699.076 ಭೂ ವಿಸ್ತೀರ್ಣವನ್ನು ಹೊಂದಿರುತ್ತದೆ. ಬೆಟ್ಟದಳ್ಳಿ ಗ್ರಾಮಪಂಚಾಯಿತಿಯು ಬೆಟ್ಟದಳ್ಳಿ,ಕುಂದಳ್ಳಿ,ಕುಮಾರಳ್ಳಿ ಮತ್ತು ಕೊತ್ತನಳ್ಳಿ ಎಂಬ ನಾಲ್ಕು ಮುಖ್ಯ ರವಿನ್ಯೂ ಗ್ರಾಮಗಳನ್ನು ಹೊಂದಿದೆ. ಹಳ್ಳಿಯೂರು, ಬೆಟ್ಟದಕೊಪ್ಪ,ಜಕ್ಕನಳ್ಳಿ,ಇನಕನಳ್ಳಿ,ಬೇಕನಳ್ಳಿ ಕನ್ನಳ್ಳಿ ಹೆಮ್ಮನಗದ್ದೆ,ನಗರಳ್ಳಿ, ಬಾಚಳ್ಳಿ, ಕೊಡಳ್ಳಿ,ಮಲ್ಲಳ್ಳಿ,ಮಾಲುಮನೆ,ಹಂಚಿನಳ್ಳಿ,ಬೀದಳ್ಳಿ,ಹೆಗ್ಗಡಮನೆ ಹೀಗೆ 21 ಉಪಗ್ರಾಮಗಳಿರುತ್ತವೆ. ಬೆಟ್ಟದಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯು ಬೆಟ್ಟಗುಡ್ಡಗಳಿಂದ ಕೂಡಿದ್ದು ಪುಪ್ಪಗಿರಿ ಬೆಟ್ಟವನ್ನು ಹೊಂದಿರುತ್ತದೆ. ಪುಷ್ಪಗಿರಿ ತಪ್ಪಲಿನಲ್ಲಿ ವಿಶಾಲವಾದ ಅರಣ್ಯವಿದೆ. ಪ್ರವಾಸಿಗರನ್ನು ಆಕರ್ಶಿಸುವ ಸುಂದರವಾದ ಮಲ್ಲಳ್ಳಿ ಜಲಪಾತವಿದೆ.  {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು [...]

BESSUR ಬೆಸ್ಸೂರು

ಬೆಸ್ಸೂರು - BESSUR ಬೆಸೂರು ಗ್ರಾಮ ಪಂಚಾಯಿತಿಯು ಕೊಡ್ಲಿಪೇಟೆ ಹೊಬಳಿಗೆ ಸೇರಿದ್ದು ಸೋಮವಾರಪೇಟೆ ತಾಲೂಕಿನಿಂದ 35 ಕಿ.ಲೋ.ಮೀಟರ್ ದೂರದ ಮಲ್ಲಿಪಟಣ್ಣ-ಕೊಡ್ಲಪೇಟೆ ಮುಖ್ಯ ರಸ್ತೆ ಬದಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು. ಕಂದಾಯ ಗ್ರಾಮಗಳಾದ ದೊಡ್ಡಭಂಡಾರ, ಕೋರಗಲ್ಲು,ಕೂಡ್ಲೂರು,ಕೆರೆಕೇರಿ,ಹೊನ್ನೇಕೋಡಿ,ಲಖನಿ, ನೀರುಗುಂದ,ಜನಾರ್ದನಹಳ್ಳಿ,ಕಟ್ಟೇಪುರ ಗ್ರಾಮಗಳನ್ನೊಳಗೊಂಡಿದ್ದು ಇಲ್ಲಿ ಸುಮಾರು 5345 ಜನಸಂಖ್ಯೆಯನ್ನು ಹೊಂದಿದ್ದಾರೆ. ಹಾಗೂ 1400 ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರೆ ವಾಸವಾಗಿದ್ದರೆ. ಹಾಗೂ 1022 ಬಿಪಿಎಲ್ ಕುಟುಂಬ 375 ಎಪಿಎಲ್ ಕುಟುಂಬಗಳನ್ನು ಹೊಂದಿದೆ. ಈ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 02 [...]

T.SHETTIGERI ಟಿ. ಶೆಟ್ಟಿಗೇರಿ

ಟಿ. ಶೆಟ್ಟಿಗೇರಿ - T.SHETTIGERI ಟಿ ಶೆಟ್ಟಿಗೇರಿ ಗ್ರಾಮ ಪಂಚಾಯ್ತಿಯು ಕೊಡಗು ಜಿಲ್ಲೆ,ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು-ಕುಟ್ಟ ರಸ್ತೆಯ 18ನೇ ಕಿ.ಮೀ ನ ಬಿರುನಾಣಿ ರಸ್ತೆಯ ಜಂಕ್ಷನ್ ಪಕ್ಕದಲ್ಲಿರುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ 62ಕಿ ಮೀ ದೂರವಿದ್ದು,ಇಲ್ಲಿಂದ ತಾಲೂಕು ಪಂಚಾಯ್ತಿ ಕಛೇರಿ,ಪೊನ್ನಂಪೇಟೆಗೆ 15ಕಿ ಮೀ ಅಂತರವಿರುತ್ತದೆ.ಈ ಗ್ರಾಮ ಪಂಚಾಯ್ತಿಯು 11435 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ.ಗ್ರಾಮ ಪಂಚಾಯ್ತಿಯು 5755ರಷ್ಟು ಜನಸಂಖ್ಯೆಯನ್ನು ಹೊಂದಿದೆ.ಗ್ರಾಮ ಪಂಚಾಯ್ತಿಯು ಟಿ ಶೆಟ್ಟಿಗೇರಿ,ಈಸ್ಟನೆಮ್ಮಲೆ,ವೆಸ್ಟ್ ನೆಮ್ಮಲೆ,ಹರಿಹರ,ಮತ್ತು ತಾವಳಗೇರಿ ಗ್ರಾಮಗಳನ್ನು ಒಳಗೊಂಡಿರುತ್ತದೆ. {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ [...]

NITTOORU ನಿಟ್ಟೂರು

ನಿಟ್ಟೂರು - NITTOORU ವಿರಾಜಪೇಟೆಯಿಂದ ಬಾಳೆಲೆ-ಹುಣಸೂರು ಹೆದ್ದಾರಿಯಲ್ಲಿ ಗೋಣಿಕೊಪ್ಪದಿಂದ 24 ಕಿ.ಮೀ.ದೂರದಲ್ಲಿ ಸಿಗುವುದೇ ನಿಟ್ಟೂರು ಗ್ರಾಮ ಪಂಚಾಯ್ತಿ. ಇದರ ವ್ಯಾಪ್ತಿಯಲ್ಲಿ 4ಸರಕಾರಿ ಶಾಲೆಗಳು,ವಸತಿ ಶಾಲೆ ಆಶ್ರಮ ಶಾಲೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ನಿಟ್ಟೂರು ಗ್ರಾ.ಪಂ.ಯು ಜಿಲ್ಲಾ ಕೇಂದ್ರದಿಂದ 69ಕಿ.ಮೀ.ದೂರದಲ್ಲಿದೆ.ನಿಟ್ಟೂರು ಗ್ರಾ.ಪಂ.ಯು ರಾಜೀವ್ ಗಾಂಧಿ ರಾಷ್ಟ್ರೀಯ ಉಧ್ಯಾನದ,ನಾಗರಹೊಳೆ ವನ್ಯಜೀವಿ ಭಾಗದ ಕಲ್ಲಾಳ ವನ್ಯಜೀವಿವಲಯದ ಹತ್ತುಗಟ್ಟು ಅರಣ್ಯ ಗ್ರಾಮವನ್ನು ಹೊಂದಿದ ಹೆಮ್ಮೆಯ ಗ್ರಾಮ ಪಂಚಾಯ್ತಿಯಾಗಿದೆ. ನಿಟ್ಟೂರು ಗ್ರಾ.ಪಂ.ಯು ಜಿಲ್ಲಾ ಕೇಂದ್ರದಿಂದ 69ಕಿ.ಮೀ.ದೂರದಲ್ಲಿದ್ದು ತಾಲ್ಲೂಕು ಕೇಂದ್ರವಾದ ವಿರಾಜಪೇಟೆ 39ಕಿ.ಮೀ.ದೂರದಲ್ಲಿದೆ.ಸದರಿ ಗ್ರಾಮ [...]

NALKERI ನಾಲ್ಕೇರಿ

ನಾಲ್ಕೇರಿ - NALKERI ನಾಲ್ಕೇರಿ ಗ್ರಾಮ ಪಂಚಾಯ್ತಿಯು ಜಿಲ್ಲಾ ಕೇಂದ್ರದಿಂದ 82 ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಿಂದ 40 ಕಿ.ಮೀ ದೂರದಲ್ಲಿದೆ ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿಯ ನಡುವೆ ರಮಣೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕದ ಕಾಶ್ಮೀರವೆಂದೇ ಬಿರುದನ್ನು ಹೊಂದಿರುವ ಪುಟ್ಟ ಜಿಲ್ಲೆಯ ಕಟ್ಟ ಕಡೆಯಪುಟ್ಟ ಪಂಚಾಯತಿಯಾಗಿದ್ದು, ಇಲ್ಲಿಯ ಸಂಸ್ಕ್ರತಿ ಆಚಾರ ವಿಚಾರ ಉಡುಪು ಆಹಾರ ಪದ್ಧತಿಗೆ ವಿಶ್ವವಿಖ್ಯಾತವಾಗಿದ್ದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ. ಮುಖ್ಯವಾಗಿ ನಾಗರಹೊಳೆ ರಾಷ್ಟೀಯ ಉದ್ಯಾನವನವಿದ್ದು;ವೀಕ್ಷಣೆಗಾಗಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರಖ್ಯಾತ [...]

KEDMULLURU ಕೆದಮುಳ್ಳೂರು

ಕೆದಮುಳ್ಳೂರು - KEDMULLURU ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಪ್ರಕೃತಿಯ ನಡುವೆ ರಮನೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕ ಕಾಶ್ಮೀರ ಎಂಬ ಬಿರುದನ್ನು ಹೊಂದಿರುವ ಕೊಡಗು ಪುಟ್ಟ ಜಿಲ್ಲೆಯಾಗಿದ್ದು ಇಲ್ಲಿಯ ಸಂಸ್ಕ್ರತಿ,ಆಚಾರ,ವಿಚಾರ,ಉಡುಪು,ಆಹಾರ ಪದ್ದತಿಗೆ ವಿಶ್ವ ವಿಖ್ಯಾತವಾಗಿದ್ದು ನಮ್ಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ.ಇಲ್ಲಿಯ ಜನರು ಧೈರ್ಯಶಾಲಿಯಾಗಿದ್ದು ,ಸೈನ್ಯ,ಕ್ರೀಡೆ ಹಾಗೂ ಉನ್ನತ ಹುದ್ದೆಗಳಲ್ಲಿ ಮೀರರಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಹೋಬಳಿಗೆ ಬರುವ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ವಿರಾಜಪೇಟೆಯಿಂದ 8.ಕಿ.ಮೀ.ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯು ವಿರಾಜಪೇಟೆ ತಾಲೋಕಿನಲ್ಲಿ ಭೌಗೋಳಿಕ ವಿಸ್ತಿರ್ಣದಲ್ಲಿ ದೊಡ್ಡದಾಗಿರುತ್ತದೆ.ಕೆದಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 4896 [...]

KANOORU ಕಾನೂರು

ಕಾನೂರು - KANOORU ವಿರಾಜಪೇಟೆಯಿಂದ ಕುಟ್ಟ-ಮಾನಂದವಾಡಿ ಹೆದ್ದಾರಿ ರಸ್ತೆಯಲ್ಲಿ ಪೊನ್ನಂಪೇಟೆಯಿಂದ-ಕುಟ್ಟ ಹೋಗುವ ಮಾರ್ಗದಲ್ಲಿ 11ಕಿ.ಮೀ ದೂರದಲ್ಲಿ ಕಾನೂರು ಗ್ರಾಮ ಪಂಚಾಯ್ತಿ ಇದ್ದು,ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾನೂರು,ಕೋತೂರು,ಹಾಗೂ ಬೆಕ್ಕೆಸೊಡ್ಲೂರು ಎಂಬ 3 ಗ್ರಾಮಗಳನ್ನು ಹೊಂದಿರುತ್ತದೆ. ಈ ಪಂಚಾಯ್ತಿಯು 3 ಉಪ-ಗ್ರಾಮಗಳನ್ನು ಹೊಂದಿದೆ. ಈ ಪಂಚಾಯ್ತಿಯು ಅಂದಾಜು 10,000 ಹೆಕ್ಟೇರ್ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ. ಈ ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡವರು,ಅಮ್ಮಕೊಡವರು,ಮುಸ್ಲಿಂಮರು ವಕ್ಕಲಿಗರು ಸಹಬಾಳ್ವೆಯಲ್ಲಿ ಬಾಳುವೆ ನಡೆಸುತ್ತಿದ್ದಾರೆ.ಕಾನೂರು ಗ್ರಾಮಪಂಚಾಯ್ತಿಯ70%ಜನ ಕೃಷಿಕರಾಗಿದ್ದು,ಬಾಕಿ 20% ಜನ ಕೂಲಿ ಕೆಲಸವನ್ನುಅವಲಂಬಿಸಿರುತ್ತಾರೆ.ಉಳಿದ 10%ಜನರು [...]

BIRUNANI ಬಿರುನಾಣಿ

ಬಿರುನಾಣಿ - BIRUNANI ಬಿರುನಾಣಿ ಗ್ರಾಮ ಪಂಚಾಯ್ತಿ ಕೊಡಗು ಜಿಲ್ಲಾ ಕೇಂದ್ರದಿಂದ ಬಿರುನಾಣಿ ಗ್ರಾಮ ಪಂಚಾಯ್ತಿಗೆ ಒಟ್ಟು 82 ಕಿ.ಮೀ,ತಾಲ್ಲೂಕು ಕೇಂದ್ರಕ್ಕೆ 50 ಕಿ.ಮೀ ದೂರವಿದ್ದು,ದಕ್ಷಿಣದ ಗಡಿ ಅಂಚಿನಲ್ಲಿರುವ ಗ್ರಾಮ ಪಂಚಾಯ್ತಿ ಆಗಿರುತ್ತದೆ.ಇದರ ಭೌಗೋಳಿಕ ವಿರ್ಸ್ತೀಣ 37,869 ಹೆಕ್ಟೇರುಗಳು ಆಗಿರುತ್ತದೆ.ಇಲ್ಲಿನ ವ್ಯವಸಾಯ ಭತ್ತ,ಕಾಫಿ,ಏಲಕ್ಕಿ,ಚಹಾ,ಬಾಳೆ,ಅಡಿಕೆ ಮುಖ್ಯವಾಗಿರುತ್ತದೆ.& ಇತರೆ ವೃತ್ತಿಯಲ್ಲಿ ಜೇನು ಸಾಕಾಣಿಕೆಗೆ ಹೆಸರು ವಾಸಿಯಾಗಿದೆ.ಪಂಚಾಯ್ತಿ ವ್ಯಾಪ್ತಿಯ ಪ್ರಾಚೀನ ಕಾಲದಿಂದಲು ಮುಂದುವರಿದು ಬಂದಿರುವ 2 ಮುಖ್ಯ ದೇವಸ್ಥಾನಗಳಿರುತ್ತದೆ.1)ಶ್ರೀ ಮೃತ್ಯುಂಜಯ ದೇವಸ್ಥಾನ ಬಾಡಗರಕೇರಿ 2) ಶ್ರೀ ಪುತ್ತು ಭಗವತಿ ದೇವಸ್ಥಾನ ಬಿರುನಾಣಿ. [...]

BETOLI ಬೇಟೋಳಿ

ಬೇಟೋಳಿ - BETOLI ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಪ್ರಕೃತಿಯ ನಡುವೆ ರಮನೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕ ಕಾಶ್ಮೀರ ಎಂಬ ಬಿರುದನ್ನು ಹೊಂದಿರುವ ಕೊಡಗು ಪುಟ್ಟ ಜಿಲ್ಲೆಯಾಗಿದ್ದು ಇಲ್ಲಿಯ ಸಂಸ್ಕ್ರತಿ,ಆಚಾರ,ವಿಚಾರ,ಉಡುಪು,ಆಹಾರ ಪದ್ದತಿಗೆ ವಿಶ್ವ ವಿಖ್ಯಾತವಾಗಿದ್ದು ನಮ್ಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ.ಇಲ್ಲಿಯ ಜನರು ಧೈರ್ಯಶಾಲಿಯಾಗಿದ್ದು ,ಸೈನ್ಯ,ಕ್ರೀಡೆ ಹಾಗೂ ಉನ್ನತ ಹುದ್ದೆಗಳಲ್ಲಿ ಮೀರರಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಹೋಬಳಿಗೆ ಬರುವ ಬೆಟ್ಟೋಳಿ ಗ್ರಾಮ ಪಂಚಾಯಿತಿಗೆ ವಿರಾಜಪೇಟೆಯಿಂದ 2.ಕಿ.ಮೀ.ದೂರದಲ್ಲಿ {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ಬಿ [...]

BALLYAMANDOORU ಬಲ್ಯಮಂಡೂರು

ಬಲ್ಯಮುಂಡೂರು - BALLYAMUNDOORU ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿಯ ನಡುವೆ ರಮಣೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕದ ಕಾಶ್ಮೀರವೆಂದೇ ಬಿರುದನ್ನು ಹೊಂದಿರುವ ಪುಟ್ಟ ಜಿಲ್ಲೆಯಾಗಿದ್ದು, ಇಲ್ಲಿಯ ಸಂಸ್ಕ್ರತಿ ಆಚಾರ ವಿಚಾರ ಉಡುಪು ಆಹಾರ ಪದ್ಧತಿಗೆ ವಿಶ್ವವಿಖ್ಯಾತವಾಗಿದ್ದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ. ಇಲ್ಲಿಯ ಜನರು ಧ್ಯೆರ್ಯಶಾಲಿಯಾಗಿದ್ದು, ಸ್ಯೆನ್ಯ ಕ್ರೀಡೆ ಹಾಗೂ ಉನ್ನತ ಹುದ್ದೆಗಳಲ್ಲಿ ವಿರಾಜಮಾನವರಾಗಿದ್ದಾರೆ. ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಯಾಗಿದ್ದು ಒಟ್ಟು 9 ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಇದರಲ್ಲಿ 2 [...]

ARUVTHOKLU ಅರ್ವತೋಕ್ಲು

ಅರ್ವತೋಕ್ಲು - ARUVTHOKLU ಅರುವತ್ತೊಕ್ಲು ಗ್ರಾಮ ಪಂಚಾಯಿತಿಯು ವೀರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯ ರಸ್ತೆಯ ಬದಿಯಲ್ಲಿದ್ದು ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುತ್ತದೆ.ಒಟ್ಟು 2041.53 ಹೆಕ್ಟೇರ್ ವಿಸ್ತಿರ್ಣ ಇದ್ದು ಅರುವತ್ತೊಕ್ಲು,ಹಳ್ಳಿಗಟ್ಟು,ಹುದೂರು,ಮುಗುಟಗೇರಿ ಗ್ರಾಮಗಳನ್ನು ಒಳಗೊಂಡಿದ್ದು,ಒಟ್ಟು 4240 ಜನಸಂಖ್ಯೆ ಇರುತ್ತದೆ.ಅರುವತ್ತೊಕ್ಲು ಗ್ರಾಮ ಪಂಚಾಯಿತಿಯು ಹಾತೂರು,ಬಿ.ಶೆಟ್ಟಿಗೇರಿ,ಪೊನ್ನಂಪೇಟೆ ಗಡಿ ಭಾಗದವರೆಗೆ ಇದೆ.ಪಂಚಾಯಿತಿ ವ್ಯಾಪ್ತಿಯಲ್ಲಿ 3 ಸರಕಾರಿ ಶಾಲೆಗಳು,1 ಅರೇಬಿಕ್ ಶಾಲೆ,1 ಪ್ರೌಢಶಾಲೆ,ಇಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಇದ್ದು ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ.ಶ್ರೀ ಕಾಡ್ಲ ಅಯ್ಯಪ್ಪ,ಶ್ರೀ ವಿಷ್ಣುಮೂರ್ತಿ,ಶ್ರೀ ಈಶ್ವರ,ಶ್ರೀ ಭದ್ರಕಾಳಿ [...]

SAMPAJE ಸಂಪಾಜೆ

ಸಂಪಾಜೆ - SAMPAJE ಕೊಡಗು ಜಿಲ್ಲೆ,ಮಡಿಕೇರಿ ತಾ.ಕಿನಿಂದ 28 ಕಿ.ಮೀ ದೂರದಲ್ಲಿ ಸಿಗುವುದೇ ಸಂಪಾಜೆ ಗ್ರಾಮ ಪಂಚಾಯತಿ.ಪ್ರಕೃತಿ ಸೌಂದರ್ಯದ ಹಚ್ಚ ಹಸಿರ ಮಡಿಲಿನಲ್ಲಿ ನಮ್ಮೀ ಪಂಚಾಯತಿ ಇರುವುದು.ಪಯಸ್ವಿನೀ ನದಿ ಇಲ್ಲಿ ಹರಿಯುತ್ತಿರುವಳು. ಸದರಿ ಪಂಚಾಯತಿ ಸರಹದ್ದಿನಲ್ಲಿ ಚೆಂಬು ,ಮದೆ,ಪೆರಾಜೆ ಗ್ರಾಮ ಪಂಚಾಯತಿ ಇರುತ್ತದೆ. ಸಂಪಾಜೆ ಗ್ರಾಮ ಪಂಚಾಯತಿಯು 5388.78 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,2475.30 ಕೃಷಿ ಭೂಮಿ ಆಗಿರುತ್ತದೆ. ಒಟ್ಟು 3408 ಜನಸಂಖ್ಯೆಯನ್ನು ಹೊಂದಿದ್ದು,ಕನ್ನಡ,ಅರೆಕನ್ನಡ,ಮಲೆಯಾಳ,ತುಳು,ಮರಾಠಿ,ಕೊಂಕಣಿ ಭಾಷೆಗಳನ್ನಾಡುವ ಜನಾಂಗದವರು ಇರುವರು. ಹಿಂದು,ಮುಸ್ಲಿಂ ದೇವಾಲಯಗಳು ಇದ್ದು ಹಬ್ಬ,ಜಾತ್ರೆಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುವುದು. ಶ್ರೀ [...]

KALAKERINIDUGANE ಕಳಕೇರಿ ನಿಡುಗಣೆ

ಕಳಕೇರಿ ನಿಡುಗಣೆ - KALAKERINIDUGANE ಮಡಿಕೇರಿ ತಾಲ್ಲೂಕಿನಿಂದ 7 ಕಿ.ಮೀ ದೂರದಲ್ಲಿ ಹಾಗು ಅಬ್ಬಿಫಾಲ್ಸ್ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಪಂಚಾಯ್ತಿಯು ಇರುತ್ತದೆ.ಪಂಚಾಯ್ತಿಯು 1) ಹೆಬ್ಬೆಟ್ಟಗೇರಿ 2)ಕರ್ಣಂಗೇರಿ 3)ಕೆ.ನಿಡುಗಣೆ ಎಂಬ ಮೂರು ಕಂದಾಯ ಗ್ರಾಮಗಳನ್ನು ಒಳಗೊಂಡಿರುತ್ತದೆ.ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆ.ಬಾಡಗ ಗ್ರಾಮವನ್ನು ಕೆ.ನಿಡುಗಣೆ ಗ್ರಾಮಕ್ಕೆ ಸೇರಿಸಲಾಗಿದೆ. ಕೆ.ನಿಡುಗಣೆ ಗ್ರಾಮ ಪಂಚಾಯಿತಿಯು ಸುಮಾರು 7834.87 ಏಕರೆ ವಿಸ್ತೀರ್ಣವನ್ನು ಹೊಂದಿರುತ್ತದೆ. ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 637 ಕುಟುಂಬಗಳಿದ್ದು ಇದರಲ್ಲಿ 394 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುತ್ತಾರೆ.ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು [...]

GALIBEEDU ಗಾಳಿಬೀಡು

ಗಾಳಿಬೀಡು - GALIBEEDU ಗಾಳಿಬೀಡು ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲಾ ಪಂಚಾಯಿತಿಯ ಮಡಿಕೇರಿ ತಾಲ್ಲೋಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪಶ್ಚಿಮಕ್ಕೆ 8 ಕಿ.ಮೀ ದೂರದಲ್ಲಿದೆ.ಇದು ಒಂದು ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ.ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುತ್ತದೆ.ಚಳಿಗಾಲದಲ್ಲಿ ಮಳೆಯಿಂದ ಕೂಡಿದ್ದು ಬೇಸಿಗೆಯಲ್ಲಿ ಹವಾಮಾನವು ತಂಪಾಗಿರುತ್ತದೆ.ಮುಖ್ಯ ಬೆಳೆ ಭತ್ತ.ವಾಣಿಜ್ಯ ಬೆಳೆಗಳಾದ ಕಾಫಿ,ಕಿತ್ತಳೆ.ಏಲಕ್ಕಿ ಮತ್ತು ಕರಿಮೆಣಸುಗಳನ್ನು ಬೆಳೆಯುತ್ತಾರೆ.ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕಂದಾಯ ಗ್ರಾಮಗಳು ಹಾಗೂ 5 ಹಳ್ಳಿಗಳು [...]

ಹಂಚಿಕೊಳ್ಳಿ
error: Content is protected !!