ಹುದಿಕೇರಿಯ ಕಾಪು ಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ

Reading Time: < 1 minute

ಕೊಡವ ರೈಡರ್ಸ್ ಕ್ಲಬ್, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಹಾಗೂ ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹುದಿಕೇರಿ ಭದ್ರಕಾಳಿ ದೇವಸ್ಥಾನದ ಕಾಪುಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿವಿಧ ಬಗೆಯ ಕಾಡು ಹಣ್ಣುಗಳು ಸೇರಿದಂತೆ ಹತ್ತಾರು ಜಾತಿಯ ಕಾಡು ಮರದ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಹಾಗೂ ತಂಡ ಸೇರಿದಂತೆ, ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಕೇಟೊಳೀರ ವಿನ್ಸಿ ದೇವಯ್ಯ ತಂಡ ಹಾಗೂ ಅರಣ್ಯ ಮಹಾವಿದ್ಯಾಲಯದ ಕೊಣೇರೀರ ನಾಣಯ್ಯ ಸೇರಿದಂತೆ ಪ್ರಮುಖರಾದ ಕೇಟೊಳೀರ ಶಮ್ಮಿ, ತೀತಿರ ಅಭಿಷೇಕ್ ಮುತ್ತಣ್ಣ, ಚಕ್ಕೇರ ಅನುಪಮಾ ತಮ್ಮಯ್ಯ, ಕುಪ್ಪಣಮಾಡ ದಿಲೀಪ್, ಅಜ್ಜಿಕುಟ್ಟೀರ ದೇವಯ್ಯ ಮೊದಲಾದವರು ಉಪಸ್ಥಿತರಿದ್ದರು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ವರದಿ: ಚಮ್ಮಟಿರ ಪ್ರವೀಣ್‌ ಉತ್ತಪ್ಪ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x