ಚುಟುಕು ಸಾಹಿತ್ಯ ಪರಿಷತ್’ಗೆ ಮಧೋಶ್ ಪೂವಯ್ಯ ಅಧ್ಯಕ್ಷರಾಗಿ ಪುನರ್ ನೇಮಕ

ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರನ್ನು ಪುನರ್ ನೇಮಕ ಮಾಡಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತೋಂಟದಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಧೋಶ್ ಪೂವಯ್ಯ ಅವರು ಕಾರ್ಯವೈಖರಿಯನ್ನು ಗಮನಿಸಿ ಇದೀಗ ಮತ್ತೊಮ್ಮೆ ಅವರನ್ನು ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು ತಾಲೂಕು ಅಧ್ಯಕ್ಷರನ್ನು ನೇಮಕ ಮಾಡುವ ಹೊಣೆಗಾರಿಕೆಯನ್ನು ಮಧೋಶ್ ಪೂವಯ್ಯ ಹೆಗಲಮೇಲೆ ಹಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ತೂಕ್ ಬೊಳಕ್ ಕಲೆ, ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಮಧೋಶ್ ಪೂವಯ್ಯ ಪ್ರಸ್ತುತ ಕೊಡಗು ಪತ್ರಕರ್ತ ಸಂಘದ ವಿರಾಜಪೇಟೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವಿರಾಜಪೇಟೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜಡಿಮಳೆ ಎಂಬ ಕೊಡವ ಸಿನೆಮಾವನ್ನು ತಯಾರಿ ಮಾಡುವ ಮೂಲಕ ಕೊಡವ ಸಿನೆಮಾ ಮಾಡಿದ ಮೊದಲ ಕೊಡವ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಅಲ್ಲಿಯತನಕ ಕೊಡವ ಸಿನೆಮಾಗಳಿಗೆ ಕೊಡವೇತರರೇ ಬಂಡವಾಳ ಹಾಕುತ್ತಿದ್ದರು. ಇದೀಗ ಚುಟುಕು ಸಾಹಿತ್ಯ ಪರಿಷತ್’ಗೆ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಆದೇಶ ಪ್ರತಿಯನ್ನು ರಾಜ್ಯಾಧ್ಯಕ್ಷ ತೋಂಟದಾರ್ಯ ಅವರು ಮಧೋಶ್ ಪೂವಯ್ಯ ಅವರಿಗೆ ಕಳುಹಿಸಿದ್ದಾರೆ.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x