Reading Time: < 1 minute
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು.
ಜನವರಿ 1 ರಿಂದ 15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು ಇದರ ಅಂಗವಾಗಿ ಚೇಲಾವರದ ಪೋನ್ನೊಲ ಸಾರ್ಥವು ಬೈತೂರ್ ಕಾರ್ಯಾರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚೇಲಾವರದ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾಡು ತಕ್ಕರಾದ ಪಟ್ಟಚೆರುವಂಡ ಜಿಮ್ಮ ಚಿಟ್ಟಿಯಪ್ಪ,ಪ್ರಮುಖರಾದ ಪಟ್ಟಚೆರುವಂಡ ಹರಿ ಮುತ್ತಪ್ಪ ,ಚರ್ಮಣ, ಮುಂಡಿಯೋಳಂಡ ಪ್ರವೀಣ್ ಈರಪ್ಪ,ಬಾಚಮಂಡ ಲೋಕೇಶ್, ಪವನ್ ಮಂಜು,ಕುಟ್ಟನ ಶೀತಾರಾಂ, ಮತಿತ್ತರರು ಉಪಸ್ಥಿತರಿದ್ದರು.