ಸುಂಟಿಕೊಪ್ಪದಲ್ಲಿ 55ನೇ ವರ್ಷದ ಆಯುಧ ಪೂಜಾ ಸಮಾರಂಭ: ಭವ್ಯ ಆಚರಣೆಗೆ ಸಿದ್ಧತೆ
Reading Time: 4 minutes



WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ


ಸುಂಟಿಕೊಪ್ಪದಲ್ಲಿ 55ನೇ ವರ್ಷದ ಆಯುಧ ಪೂಜಾ ಸಮಾರಂಭ: ಭವ್ಯ ಆಚರಣೆಗೆ ಸಿದ್ಧತೆ

ಸುಂಟಿಕೊಪ್ಪದಲ್ಲಿ 55ನೇ ವರ್ಷದ ಆಯುಧ ಪೂಜಾ ಸಮಾರಂಭ: ಭವ್ಯ ಆಚರಣೆಗೆ ಸಿದ್ಧತೆ


ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ (ರಿ.) ಆಶ್ರಯದಲ್ಲಿ 55ನೇ ವರ್ಷದ ಅದ್ದೂರಿಯ ಆಯುಧ ಪೂಜಾ ಸಮಾರಂಭವು ದಿನಾಂಕ
01.10.2025 ರಂದು ಬುಧವಾರ ಸಂಜೆ 6:00 ಗಂಟೆಗೆ ಸುಂಟಿಕೊಪ್ಪದ ವಾಹನ ಚಾಲಕರ ಸಂಘದ
ಸಾರ್ವಜನಿಕ ವೇದಿಕೆಯಲ್ಲಿ ನಡೆಯಲಿದೆ. ಈ ವಾರ್ಷಿಕೋತ್ಸವ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ದಿನಾಂಕ

01.10.2025

ಸಮಯ

ಸಂಜೆ 6:00 ಗಂಟೆಗೆ

ಸ್ಥಳ

ಸಾರ್ವಜನಿಕ ವೇದಿಕೆ

ಸಭಾ ಕಾರ್ಯಕ್ರಮದ ವಿವರಗಳು

ಆಯುಧ ಪೂಜಾ ಮಹೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ವಿವರಗಳು ಹೀಗಿವೆ:

  • ಪ್ರಾರ್ಥನೆ
  • ಸ್ವಾಗತ ಭಾಷಣ
  • ಪ್ರಾಸ್ತಾವಿಕ ಭಾಷಣ
  • ದೀಪ ಬೆಳಗುವುದರ ಮೂಲಕ ಉದ್ಘಾಟನೆ
  • ಸನ್ಮಾನ ಕಾರ್ಯಕ್ರಮ
  • ಅತಿಥಿಗಳಿಂದ ಭಾಷಣ
  • ಬಹುಮಾನ ವಿತರಣೆ
  • ಅಧ್ಯಕ್ಷರ ಭಾಷಣ
  • ವಂದನಾರ್ಪಣೆ

ಗಣ್ಯರ ಉಪಸ್ಥಿತಿ

ಅಧ್ಯಕ್ಷತೆ ವಹಿಸುವವರು

ಡಾ. ಮಂತರ್‌ ಗೌಡ

ಮಾನ್ಯ ಶಾಸಕರು, ಮಡಿಕೇರಿ ವಿಧಾನ ಸಭಾ ಕ್ಷೇತ್ರ

ಉದ್ಘಾಟಿಸುವವರು

ಶ್ರೀ ಪಿ. ಲೋಕೇಶ್ ಕುಮಾರ್

ಕಾನೂನು ಸಲಹೆಗಾರರು, ಕೊಡಗು ಜಿಲ್ಲಾಡಳಿತ

ಮುಖ್ಯ ಅತಿಥಿಗಳು

  • ಶ್ರೀ ಎಂ.ಪಿ. ಅಪ್ಪಚ್ಚು ರಂಜನ್ (ಮಾಜಿ ಸಚಿವರು)
  • ಶ್ರೀ ಕೆ.ಎಂ. ಇಬ್ರಾಹಿಂ (ಮಾಜಿ ಶಾಸಕರು)
  • ಶ್ರೀ ಸುನಿಲ್ ಕುಮಾರ್ ಪಿ.ಆರ್. (ಗ್ರಾಮ ಪಂಚಾಯತಿ ಅಧ್ಯಕ್ಷರು)
  • ಇತರೆ ಜಿಲ್ಲಾ ಮತ್ತು ಸ್ಥಳೀಯ ಗಣ್ಯರು

ಮುಖ್ಯ ಅತಿಥಿಗಳ ಸಂಪೂರ್ಣ ಪಟ್ಟಿಯಲ್ಲಿ ಜಿಲ್ಲಾ ಮತ್ತು ಸ್ಥಳೀಯ ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರಮುಖ ಕಾಫಿ ಬೆಳೆಗಾರರು ಸೇರಿದ್ದಾರೆ.

ವಿವಿಧ ಸ್ಪರ್ಧೆಗಳು ಮತ್ತು ಬಹುಮಾನ ದಾನಿಗಳು

ಈ ಸಂದರ್ಭದಲ್ಲಿ ವಿವಿಧ ವಾಹನ ಮತ್ತು ಮಳಿಗೆ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ವಿಶೇಷ ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಾಗುತ್ತದೆ. ದಾನಿಗಳ ವಿವರಗಳು ಹೀಗಿವೆ:

ವರ್ಕ್‌ ಶಾಪ್ ಅಲಂಕಾರ ಸ್ಪರ್ಧೆ

ದಾನಿಗಳು: ಶ್ರೀ ಆಲಿಕುಟ್ಟಿ, ಶ್ರೀ ಪ್ರಸಾದ್ ಕುಟ್ಟಪ್ಪ ಮತ್ತು ಶ್ರೀ ಶಭೀರ್ (ಗ್ರಾಮ ಪಂಚಾಯತಿ ಸದಸ್ಯರು)

ಕಛೇರಿ ಮತ್ತು ಸಂಘ ಸಂಸ್ಥೆಗಳ ಅಲಂಕಾರ ಸ್ಪರ್ಧೆ

ದಾನಿಗಳು: ಶ್ರೀ ಆಸಿಫ್ ಪಿ.ಕೆ., ಪಿ.ಖಾದ‌ರ್ ಅಂಡ್ ಸನ್ಸ್, ಸುಂಟಿಕೊಪ್ಪ

ಅಂಗಡಿ ಮಳಿಗೆ ಅಲಂಕಾರ ಸ್ಪರ್ಧೆ

ದಾನಿಗಳು: ಎ.ಕೆ.ಜಿ ಟಿಂಬರ್ಸ್. ಮರ ವ್ಯಾಪಾರಿಗಳು, ನಾಕೂರು ತಿರಂಗಾಲ

ದೊಡ್ಡ ವಾಹನಗಳ ಅಲಂಕಾರ ಸ್ಪರ್ಧೆ

ದಾನಿಗಳು: ಶ್ರೀಮತಿ ನಳಿನಿ ಲೋಕೇಶ್ (ದಿ. ಪಿ.ಕೆ. ಲೋಕೇಶ್ ರವರ ಜ್ಞಾಪಕಾರ್ಥ)

ಚಿಕ್ಕ ವಾಹನಗಳ ಅಲಂಕಾರ ಸ್ಪರ್ಧೆ

ದಾನಿಗಳು: ಶ್ರೀಮತಿ ಯಂಕನ ವಿಮಲ ಮತ್ತು ಪುತ್ರ ಶ್ರೀ ಯಂಕನ ಶ್ರೀರಾಮ್ (ದಿ. ಯಂಕನ ವೇಣುಕುಮಾರ್‌ರವರ ಜ್ಞಾಪಕಾರ್ಥ) ಹಾಗೂ ಶ್ರೀ ರತೀಶ್, ಮಡಿಕೇರಿ ಕ್ರೇನ್ ಸರ್ವಿಸ್

ಆಟೋರಿಕ್ಷಾ ಅಲಂಕಾರ ಸ್ಪರ್ಧೆ

ದಾನಿಗಳು: ಶ್ರೀ ಸುದೀಪ್ ರಾಡ್ರಿಗಸ್, ಕಾಪ್ ಡೈಮ್ ಬಾಕ್ ವಾಟರ್ ರೆಸಾರ್ಟ್ಸ್, ಚಿಕ್ಲಿಹೊಳೆ

ಸ್ಮರಣಿಕೆ ದಾನಿಗಳು: ಕ್ಯಾಪ್ಟನ್ ಗ್ರೂಪ್, ಸುಂಟಿಕೊಪ್ಪ, ಮತ್ತು ಶ್ರೀ ಅಯ್ಯಪ್ಪ, ಗುತ್ತಿಗೆದಾರರು, ಗುಡ್ಡಪ್ಪ ರೈ ಬಡಾವಣೆ, ಸುಂಟಿಕೊಪ್ಪ.

ವಾಹನ ಚಾಲಕರ ಸಂಘದ ಆಡಳಿತ ಮಂಡಳಿ (2025)

ಅಧ್ಯಕ್ಷರು:

ಕೆ.ವಿ. ಕಿಟ್ಟಣ್ಣ ರೈ

ಉಪಾಧ್ಯಕ್ಷರು:

ಅಬ್ದುಲ್ಲ ಕುಟ್ಟಿ, ಕೃಷ್ಣಪ್ಪ ಬಿ.ಎ.

ಪ್ರಧಾನಕಾರ್ಯದರ್ಶಿ:

ಮುನೀರ್ ಕಂಬಿಬಾಣೆ, ಅಜೀಜ್ ಕೊಡಗರಹಳ್ಳಿ

ಸಹ ಕಾರ್ಯದರ್ಶಿ:

ರಕ್ಷಿತ್ (ರಿನ್ನು)

ಸಂಘಟನಾ ಕಾರ್ಯದರ್ಶಿ:

ರಿಜ್ವಾನ್ ಎಂ.ವಿ.

ಸಲಹಾ ಸಮಿತಿ ಸದಸ್ಯರು:

ರಾಜ ಆರ್. ಇಸ್ಮಾಯಿಲ್ (ಕಾಕು)

ಬಸಪ್ಪ, ಅಸ್ಪರ್, ಸಂದೀಪ್ ಬಿ.ಎಸ್. ಸೇರಿದಂತೆ ಹಲವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶುಭ ಕೋರಿದವರು: ಕು|| ದಿಯಾ ದೇಚಮ್ಮ ದೊಡ್ಡಮನೆ


ಬೋಜನ ವ್ಯವಸ್ಥೆ

ಸಾರ್ವಜನಿಕರಿಗೆ ಬೋಜನದ ವ್ಯವಸ್ಥೆಯನ್ನು ಈ ದಾನಿಗಳ ವತಿಯಿಂದ ಕಲ್ಪಿಸಲಾಗಿದೆ:

  • ಶ್ರೀ ಎಸ್.ಯು. ಝಾಯ್ಡ್, ಮಾಲೀಕರು, ಸ್ಯಾಂಡಲ್‌ವುಡ್ ತೋಟ, ಸುಂಟಿಕೊಪ್ಪ
  • ಶ್ರೀ ಪ್ರೇಮ್, ವೇಲಾಂಗಣಿ ಕ್ರೇನ್ ಸರ್ವೀಸ್, ಸುಂಟಿಕೊಪ್ಪ


ಸಮಸ್ತ ಸಾರ್ವಜನಿಕರು ಈ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯವರು ಕೋರಿದ್ದಾರೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x