Kalanagara Samskruthika Kala Vedike Madikeri ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ
ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ (ರಿ)
ರಾಘವೇಂದ್ರ ದೇವಾಲಯದ ಬಳಿ ಮಡಿಕೇರಿ – 57102, ಕೊಡಗು
ಪ್ರಾಸ್ತಾವಿಕ
ಚಿತ್ರಶಾಲೆ
ಸರ್ಚ್ ಕೂರ್ಗ್ ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಭಾರತದ 69ನೇ ಗಣರಾಜ್ಯೋತ್ಸವ ಆಚರಣೆ
ಮಡಿಕೇರಿ ಜ. 26. ಸ್ಥಳೀಯ ಮಡಿಕೇರಿಯ ರಾಘವೇಂದ್ರ ದೇವಾಲಯದ ಬಳಿಯಿರುವ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆÀ(ರಿ) ವತಿಯಿಂದ 69ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ನಗರಸಭಾ ಸದಸ್ಯರೂ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರೂ ಆದ ಶ್ರೀ ಚುಮ್ಮಿ ದೇವಯ್ಯ ಭಾರತದ ತ್ರಿವರ್ಣ ಧ್ವÀ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚುಮ್ಮಿ ದೇವಯ್ಯನವರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತ ಗಣರಾಜ್ಯ. ಇಲ್ಲಿ ಸರ್ವರಿಗೂ ಸಮಪಾಲು-ಸಮಬಾಳು ದೊರಕುವಂತಾಗಬೇಕು. ಆಗ ನಮ್ಮ ಗಣರಾಜ್ಯಕ್ಕೆ ಪೂರ್ಣ ಪ್ರಮಾಣದ ಮಹತ್ವ ದೊರೆಯುತ್ತದೆ. ಇದಕ್ಕೆ ನಾವೆಲ್ಲರೂ ಒಗ್ಗೂಡಿ ಮುಂದುವರೆಯೋಣ ಈ ದೇಶದ ಅಖಂಡತೆಗೆ ನಮ್ಮ ತನು-ಮನ-ಧನದಿಂದ ಸಮರ್ಪಿಸಿಕೊಳ್ಳೋಣ, ಭವ್ಯ ಭಾರತದ ಕನಸನ್ನು ಸಕಾರಗೊಳಿಸಲು ಪ್ರಯತ್ನಿಸೋಣ ಎಂದು ಹೇಳಿದರು.
ಧ್ವÀ್ವಜಾರೋಹಣ ಸಂದರ್ಭ ಈ ಭಾಗದ ನಾಗರೀಕರು, ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಪಧಾದಿಕಾರಿಗಳು, ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯ ಪಧಾದಿಕಾರಿಗಳು ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯ ಅಧ್ಯಕ್ಷರಾದ ಅಪ್ಪು ಮಹೇಶ್ರವರು ವಂದನಾರ್ಪಣೆಯನ್ನು ಮಾಡಿದರು.
ಸಂದರ್ಶನ:
ವ್ಯವಸ್ಥಾಪನ ಸಮಿತಿ


Good job ?