ಕರಗಗಳ ಕುಂಭ ಪೂಜೆ:

ವಿಜಯದಶಮಿ ಕಳೆದು 3 ದಿನಗಳ ನಂತರ ಕುಂಭ ಪೂಜೆಯನ್ನು ನಡೆಸಲಾಗುವುದು. ಇದು ಕರಗ ವಿಸರ್ಜಿಸುವ ದಿನ, ಅಂದರೆ ಕರಗ ಪೂಜೆಯ ಕೊನೆಯ ಹಂತ ಅಂದು ಅರ್ಚಕರು ಕರಗ, ಕಠಾರಿ, ಬೆತ್ತಗಳಿಗೆ ಕಟ್ಟಿರುವ ಕಂಕಣವನ್ನು ಬಿಚ್ಚಲಾಗುತ್ತದೆ. ಮೊದಲು ಆಯಾ ದೇಗುಲಗಳಿಗೆ ಮೊಸರನ್ನ ಮತ್ತು ಎಳೆನೀರಿನ ಅಭಿಷೇಕವನ್ನು ಅರ್ಪಿಸಲಾಗುತ್ತದೆ. ಇದಾದ ಕೂಡಲೇ ದೇಗುಲದ ಬಾಗಿಲನ್ನು ಮುಚ್ಚುತ್ತಾರೆ. ನಂತರ ಹೊರಭಾಗದಲ್ಲಿ ಮಾಂಸಹಾರದ ಭೊಜನವನ್ನು (ಎಡೆಯನ್ನು) ಬಡಿಸಲಾಗುವುದು. ಕುಸಲಕ್ಕಿಯ ಅನ್ನ ಮತ್ತು ಒಣಗಿದ ಮೀನುಮತ್ತು ಬದನೆಕಾಯಿಯ ವಿಶಿಷ್ಟಸಾರು ಕೂಡ ಸೇರಿರುತ್ತದೆ. ಆದರೆ ಕಂಚಿಕಾಮಾಕ್ಷಿಯಮ್ಮ ದೇಗುಲಕ್ಕೆ ನೈವೇದ್ಯವನ್ನು ಮಾತ್ರ ಅರ್ಪಿಸುತ್ತಾರೆ. ಏಕೆಂದರೆ ಕಂಚಿಕಾಮಾಕ್ಷಿಯಮ್ಮ ದೇವಿಯು ಶಾಂತ ಸ್ವರೂಪಿಣಿಯಾಗಿದ್ದು, ಇಲ್ಲಿ ಪ್ರಾಣಿ ಬಲಿಗೆ ಅವಕಾಶವಿಲ್ಲ. ಈ ರೀತಿಯಲ್ಲಿ ಕರಗ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
-
•
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
-
•
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
-
•
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.