ಸಿ.ಹೆಚ್.ಇ.ಎಸ್. ಟ್ರೈಕೋಡರ್ಮ ಹರ್ಜಿಯಾನಮ್

Reading Time: 5 minutes 

Reading Time: 5 minutes

ಸಿ.ಹೆಚ್.ಇ.ಎಸ್. ಟ್ರೈಕೋಡರ್ಮ ಹರ್ಜಿಯಾನಮ್

ಪ್ರಸ್ತುತ ಕೊಡಗಿನ ವಾಣಿಜ್ಯ ಬೆಳೆಗಳಿಗೆ ತಗಲುತ್ತಿರುವ ಮಾರಕ ರೋಗಗಳಾದ ಕಿತ್ತಳೆ ಗಿಡದ ಬೇರು ಕೊಳೆಯುವುದು, ಕರಿಮೆಣಸು ಬಳ್ಳಿಯ ಫೈಟೋಪ್ತೋರ ಸೊರಗುರೋಗ, ಶುಂಠಿ ಗಿಡದ ಬೇರು ಕಾಂಡ ಕೊಳೆಯುವಿಕೆ, ಏಲಕ್ಕಿ ಗಿಡದ ಬೇರುಕಾಂಡ ಮತ್ತು ಕಾಯಿಕೊಳೆಯುವುದು ಮತ್ತೆ ಇನ್ನೂ ಮಣ್ಣಿನಿಂದ ಹರಡುವ ಇತರೆ ರೋಗಗಳ ನಿಯಂತ್ರಣದಲ್ಲಿ ಉತ್ತಮ ಗುಣಮಟ್ಟದ, ಪರಿಣಾಮಕಾರಿ ಜೈವಿಕ ನಿಯಂತ್ರಣ ಶಿಲೀಂದ್ರವಾದ ಟ್ರೈಕೋಡರ್ಮ ಹರ್ಜಿಯಾನಮ್‍ನ್ನು ಕೊಡಗಿನ ಮಣ್ಣಿನಿಂದಲೇ ಬೇರ್ಪಡಿಸಿ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಈ ತಂತ್ರಜ್ಞಾನದ ಬಳಕೆಯ ಪ್ರಮುಖ ಅಂಶಗಳನ್ನು ಈ ಕೆಳಗೆ ಸೂಚಿಸಲಾಗಿದೆ.

1 ಉಪಯೋಗಿಸುವ ವಿಧಾನ: ಕೇಂದ್ರದಿಂದ ಪಡೆದ 1 ಕೆ.ಜಿ. ಟ್ರೈಕೋಡರ್ಮವನ್ನು 100 ಕೆ.ಜಿ. ಚೆನ್ನಾಗಿ ಕೊಳೆತ ಹಾಗೂ ಒಣಗಿದ ಸಗಣಿ ಗೊಬ್ಬರ ಅಥವಾ ಬೇವಿನ ಹಿಂಡಿಯೊಂದಿಗೆ ಮಿಶ್ರಣ ಮಾಡಿ ಸುಮಾರು ಶೇ. 30-40 ತೇವಾಂಶವಿರುವಂತೆ ನೀರು ಚುಮುಕಿಸಿ ಅಣುಜೀವಿ ಅಭಿವೃದ್ಧಿಯಾಗಲು ರಾಶಿ ಕೂಡಿಸಿ 2-3 ದಿನಗಳವರೆಗೆ ಇಡಬೇಕು. ಈ ರೀತಿ ಉಪಚರಿಸಿದ ಟ್ರೈಕೋಡರ್ಮವನ್ನು 10 ವರ್ಷ ಮೇಲ್ಪಟ್ಟ ಗಿಡಗಳಿಗೆ 10 ಕೆ.ಜಿ. ಮಿಶ್ರಣ (100 ಗ್ರಾಂ ಟ್ರೈಕೋಡರ್ಮ) ಮತ್ತು 10 ವರ್ಷದೊಳಗಿನ ಗಿಡಗಳಿಗೆ 5 ಕೆ.ಜಿ. ಮಿಶ್ರಣz (50 ಗ್ರಾಂ ಟ್ರೈಕೋಡರ್ಮ) ಪ್ರಮಾಣದಲ್ಲಿ ಬಳ್ಳಿಯ ಸುತ್ತಲು ಬುಡದಿಂದ ಒಂದಡಿ ಅಂತರದಲ್ಲಿ ಮಣ್ಣಿನಲ್ಲಿ ಮಿಶ್ರಣವಾಗುವಂತೆ ಹರಡಿ ಒಣಗಿದ ಎಲೆಗಳಿಂದ ಮುಚ್ಚಬೇಕು. ಇತರೆ ಬೆಳೆಗಳಿಗೆ ಒಂದು ಎಕ್ರೆ ಭೂಮಿಗೆ 10 ಕೆ.ಜಿ. ಹಾಗೂ ಪ್ರತಿ ಹೂಕುಂಡಕ್ಕೆ 5-10 ಗ್ರಾಂ ಪ್ರಮಾಣದಲ್ಲಿ ಟ್ರೈಕೋಡರ್ಮವನ್ನು ಹಾಕಬಹುದು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

2 ಉಪಯೋಗಿಸುವ ಸಮಯ: ವರ್ಷದಲ್ಲಿ ಎರಡು ಬಾರಿ ಮುಂಗಾರಿನಲ್ಲಿ ಮೇ, ಜೂನ್ ತಿಂಗಳು ಮತ್ತು ಹಿಂಗಾರಿನಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಉಪಯೋಗಿಸುವುದು ಸೂಕ್ತ.

3 ಮುನ್ನೆಚ್ಚರಿಕೆಯ ಕ್ರಮಗಳು
• ಭೂಮಿಯಲ್ಲಿ ತೆವಾಂಶ ಅತೀ ಹೆಚ್ಚು ಅಥವಾ ಕಡಿಮೆಯಿದ್ದಾಗ ಟ್ರೈಕೋಡರ್ಮ ಬಳಸುವುದು ಸೂಕ್ತವಲ್ಲ.
• ಟ್ರೈಕೋಡರ್ಮ ಹಾಕುವ 15 ದಿವಸಗಳ ಮೊದಲು ಹಾಗು ನಂತರ ಯವುದೇ ವಿಧದ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು.
• ಚೆನ್ನಾಗಿ ಕೊಳೆತು ಕಾಂಪೋಸ್ಟು ಆಗದಿರುವ ಕಾಫಿ ತ್ಯಾಜ್ಯ ಮೂಲದ ಗೊಬ್ಬರಗಳನ್ನು ಬಳಸಬಾರದು.
• ಟ್ರೈಕೋಡರ್ಮ ಹಾಕಿದ ಮೇಲೆ ಯಾವುದೇ ರಸಾಯನಿಕ ಶಿಲೀಂದ್ರನಾಶಕಗಳನ್ನು ಮಣ್ಣಿನ ಮೂಲಕ ಬಳಸಬಾರದು.

4 ಟ್ರೈಕೋಡರ್ಮ ಬಳಕೆಯಿಂದುಂಟಾಗುವ ಪರಿಣಾಮಗಳು: ಪೋಷಕಾಂಶಭರಿತ ಕೊಳೆತ ಕಾಫಿ ಗೊಬ್ಬರದ ಮೇಲೆ ಇದನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಇದರ ಸತತ ಬಳಕೆಯಿಂದ ಮಣ್ಣಿನಲ್ಲಿರುವ ಸಾರಜನಕ ಮತ್ತು ಪೊಟಾಶಿಯಂನ ಪ್ರಮಾಣ ಅಭಿವೃದ್ದಿ ಹೊಂದಿ, ಮಣ್ಣಿನ ರಸಸಾರ (6.5-7.5) ಹೆಚ್ಚಾಗಿ ಮಣ್ಣಿನಲ್ಲಿರುವ “ಫೈಟೋಪ್ತೋರ” ರೋಗಾಣುವಿನ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದರ ಪರಿಣಾಮ, ಗಿಡದ ಬೇರು ಸಮೃದ್ದಿಯಾಗಿ ಬೆಳೆದು ಗಿಡಗಳ ಬೆಳವಣಿಗೆ ಗಣನೀಯವಾಗಿ ವೃದ್ಧಿ ಹೊಂದಿ ಉತ್ತಮ ಫಸಲು ದೊರಕಲು ಸಹಕಾರಿಯಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬೇಸಾಯದಲ್ಲಿ ಉತ್ತಮ ಗುಣಮಟ್ಟದ ಟ್ರೈಕೋಡರ್ಮದ ಉಪಯೋಗ, ಪರಿಸರ ಪೂರಕ ತಂತ್ರಜ್ಞಾನವಾಗಿದೆ. ಇದಲ್ಲದೆ ಟ್ರೈಕೋಡರ್ಮದ ನಿರಂತರ ಬಳಕೆಯಿಂದ ಭೂಮಿಯಲ್ಲಿ ಸೂಕ್ಷ್ಮ ತಂತು ಹುಳುಗಳ ಸಂಖ್ಯೆ ಕುಂಠಿತವಾಗುವುದೆಂದು ಸಂಶೋಧನೆಗಳಿಂದ ಕಂಡುಬಂದಿದೆ.
5 ಗಮನಿಸಬೇಕಾದ ಕೆಲವು ಅಂಶಗಳು
• ಈ ಮೊದಲೇ ರೋಗ ತಗುಲಿದ ಗಿಡಗಳಿಗೆ ಟ್ರೈಕೋಡರ್ಮ ಬಳಸುವುದರಿಂದ ರೋಗ ಗುಣವಾಗಲಾರದು. ಯಾವುದೇ ರೋಗಬಾರದೆ ಉತ್ತಮವಾಗಿ ಬೆಳೆಯುತ್ತಿರುವ ಗಿಡಗಳಿಗೆ ಇದನ್ನು ಬಳಸುವುದರಿಂದ ಕ್ರಮೇಣ ರೋಗ ತಗಲದಂತಹ ಸನ್ನಿವೆಶವನ್ನು ಪಡೆಯಬಹುದು. ಟ್ರೈಕೋಡರ್ಮವು ರೋಗನಿರೋಧಕ ಜೀವಾಣು.
• ಮಣ್ಣಿನಲ್ಲಿರುವ ಟ್ರೈಕೋಡರ್ಮದ ಸಂಖ್ಯೆಯು ವೃದ್ಧಿಸಿ ರೋಗದ ಹತೋಟಿಯನ್ನು ಸಾಧಿಸಬೇಕಾದರೆ ಕನಿಷ್ಠ 3-4 ವರ್ಷಗಳ ಕಾಲ ಇದನ್ನು ಸತತವಾಗಿ ಉಪಯೋಗಿಸಬೇಕಾಗಬಹುದು.
• ಟ್ರೈಕೋಡರ್ಮದ ಉಪಯೋಗವನ್ನು ಮಣ್ಣಿನಲ್ಲಿ ಸೂಕ್ತ ತೇವಾಂಶವಿರುವಾಗ ಮಾತ್ರ ಮಾಡಬೇಕು.
• ಮಣಿನಲ್ಲಿರುವ ಟ್ರೈಕೋಡರ್ಮದ ಜೀವಾಣು ಹಾಗೂ ರೋಗಾಣುಗಳ ಸಂಖ್ಯೆ ಸಮತೋಲನದಲ್ಲಿರುವಂತೆ ಮಾಡಲು ಸಾವಯವ ವಸ್ತುಗಳಾದ ಸಗಣಿ ಗೊಬ್ಬರ (15-20 ಕೆ.ಜಿ ಗಿಡಕ್ಕೆ), ಬೇವಿನ ಹಿಂಡಿ (5 ಕೆ.ಜಿ. ಗಿಡಕ್ಕೆ), ಎರೆಹುಳು ಗೊಬ್ಬರ (2 ಕೆ.ಜಿ ಗಿಡಕ್ಕೆ), ಕೊಳೆತ ಎಲೆ ಮುಂತಾದವುಗಳನ್ನು ಉಪಯೋಗಿಸುತ್ತಿರಬೇಕು.
• ಗಾಳಿಯ ಮೂಲಕ ಹರಡುವ ಪೈಟೋಪ್ತೊರ ರೋಗದ ನಿಯಂತ್ರಣಕ್ಕೆ ಎಲಿಯೇಟ್ (2 ಗ್ರಾಂ/ಲೀ) ಬೆರೆಸಿ ಗಿಡಗಳಿಗೆ ಸಿಂಪಡಣೆ ಮಾಡಬೆಕು ಶೇ. 10ರ ಬೋರ್ಡೋ ಮಿಶ್ರಣವನ್ನು ಗಿಡದ ಬುಡಕ್ಕೆ ಹಚ್ಚಬೇಕು. ಶೇ. 1ರ ಬೋರ್ಡೋ ಅಥವಾ ರಿಡೋಮಿಲ್ + ಮ್ಯಾಂಕೋಜೆಬ್ (2 ಗ್ರಾಂ/ಲೀ) ಸಿಂಪಡಿಸಿ ಕೊಳೆ ರೋಗವನ್ನು ನಿಯಂತ್ರಿಸಬಹುದು.
• ಟ್ರೈಕೋಡರ್ಮದ ಜೀವಾಣುಗಳನ್ನು ಅಭಿವೃದ್ಧಿಯಾಗುವಂತೆ ಪ್ರೊತ್ಸಾಹಿಸಲು ಸಾವಯವ ಗೊಬ್ಬರದೊಂದಿಗೆ ಬೆರೆಸಿ ಇಡುವ ರಾಶಿಯು 2 ಅಡಿಗಿಂತ ಎತ್ತರವಿರಬಾರದು.
• ಸಾಮಾನ್ಯ ತಾಪಮಾನದಲ್ಲಿ ಟ್ರೈಕೋಡರ್ಮದ ಗುಣಮಟ್ಟ ಹಾಳಾಗದಂತೆ 6 ತಿಂಗಳು ದಾಸ್ತಾನು ಇಡಬಹುದು.
• ಟ್ರೈಕೋಡರ್ಮ ಹಾಕಿ ಮಣ್ಣಿನಲ್ಲಿ ಮಿಶ್ರಮಾಡುವಾಗ ಗಿಡದ ಬೇರುಗಳು ಹರಿದು ತುಂಡಾಗದಂತೆ ಎಚ್ಚರವಹಿಸಬೇಕು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x